ನಾಯಕನಹಟ್ಟಿ: ಸಮೀಪದ ರೇಖಲಗೆರೆ ಗ್ರಾಮದ ಮಸೀದಿ -ಎ- ಗೌಸಿಯಾ ಅರೀಪ್ ಆಲಿ- ಷಾ ಖಾದ್ರಿ ಆಸ್ಥಾನದಲ್ಲಿ ಗುರು ವಾರ ನೂರಾರು ಮುಸ್ಲಿಂ ಭಾಂಧವರು ಬಕ್ರಿದ್ ಹಬ್ಬದ ಹಿನ್ನೆಲೆ ಶ್ರದ್ಧಾಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಶುಭಾಶಯಗಳು ವಿನಿಮಯ ಮಾಡಿಕೊಂಡರು.
ಪವಿತ್ರ ಬಕ್ರೀದ್ ಹಬ್ಬದ ನಮೋಜನ ಪ್ರಾರ್ಥನೆ ಮೂಲಕ ಜಾಫರ್ ಮೌಲಾನ ಪ್ರಾರ್ಥಿಸಿದರು
ಇದೇ ವೇಳೆಯಲ್ಲಿ ರೇಖಲಗೆರೆ ಧರ್ಮ ಗುರು ಹಬೀಬ್ ಗುರೂಜಿ
ಮಾತನಾಡಿದರು, ಸೃಷ್ಟಿಕರ್ತ ಅಲ್ಲಾಹು ಅವರ ಅಗ್ನಿಯಂತೆ ಪುತ್ರ ವಾತ್ಸಲ್ಯವನ್ನು ಮೀರಿ ದೇವರಿಗಾಗಿ ಪುತ್ರನನ್ನೇ ಬಲಿಕೊಡಲು ಮುಂದಾದ ಪ್ರವಾದಿ ಇಬ್ರಾಹಿಂ( ಸ) ಅವರ ದೈವ ನಿಷ್ಠೆ ಹಾಗೂ ಭಕ್ತಿಯನ್ನು ಜಗತ್ತಿಗೆ ಸಾರಿದ ದಿನವನ್ನಾಗಿ ಬಕ್ರೀದ್ ಹಬ್ಬವೆಂದು ಆಚರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅರೀಪ್ ಅಲಿ- ಷಾ. ಖಾದ್ರಿ ಆಸ್ಥಾನ ಟ್ರಸ್ಟ್ ಅಧ್ಯಕ್ಷ
ಯೂಖೂಬ್,
ಉಪಾಧ್ಯಕ್ಷರು
ಗೌಸಪೀರ್ ಖಾನ್, ಕಾರ್ಯದರ್ಶಿ
,ಅಪ್ಜಲ್ ಖಾನ್,ಸದಸ್ಯರಾದ ನೂರುಲ್ಲಾ,ಯೋಸೂಪ್, ಮನ್ಸೂರ್ ಖಾನ್, ಅಜಮ್, ಇರ್ಫಾನ್, ಸಿದ್ದಿಕ್, ಸರ್ಮಸ್, ಗ್ರಾಮಸ್ಥರಾದ ಇಬ್ರಾಹಿಂ ಖಾನ್, ಯಾಸಿನ್ ಖಾನ್, ಮನ್ಸೂರ್ ಸಾಬ್, ಅಲಿ.
ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.