ಜಗಳೂರು:- ಸಾಮಾಜಿಕ ಬದುಕಿನ ಮೌಲ್ಯಗಳುಳ್ಳ 12ನೇ ಶತಮಾನದ ಬಸವಣ್ಣನವರ ವಚನಗಳನ್ನು ಜನ ಸಾಮಾನ್ಯರಿಗೆ ಪರಿಚಯ ಮಾಡಿಕೊಡಬೇಕೆಂದು ಎಸ್ಕೆಒಎಸ್ ಟಿ ಮೆಮೋರಿಯಲ್ ಮುಖ್ಯ ಶಿಕ್ಷಕರು ಶ್ರೀಮತಿ ಅನಿತಾ ತಿಳಿಸಿದರು.
ಸೋಮವಾರ ಜಗಳೂರು ತಾಲೂಕಿನ ಸೂಕ್ಕೆ ಗ್ರಾಮದ ಎಸ್ ಕೆ ಒ ಎಸ್ ಟಿ ಮೆಮೋರಿಯಲ್ ಶಾಲೆಯಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು.
ಶಿವಶರಣ ಭಕ್ತಿ ಶ್ರದ್ಧೆ ಮತ್ತು ಅವರಲ್ಲಿನ ಕಾಯಕ ಮುಂತಾದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಶಿಕ್ಷಕಿ ಸೌಭಾಗ್ಯ ತಿಪ್ಪೇಸ್ವಾಮಿ ,ನೇತ್ರಾವತಿ, ಅನಿತಾ, ಕವನ ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.