ಚಳ್ಳಕೆರೆ, ಆ.4: ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆಯ ಕೇಂದ್ರ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚಳ್ಳಕೆರೆ ನಗರದ ಬೆಸ್ಕಾಂನ ಸಹಾಯಕ ಸಿ. ನಾಗರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರು ನಗರದ ಭೀಮರಾವ್ ಪ್ಯಾಲೇಸ್ನಲ್ಲಿ ನಡೆದ ಸಂಸ್ಥೆಯ ಚುನಾವಣೆಯಲ್ಲಿ ಹಿರಿಯೂರು ವಿಭಾಗವನ್ನು ಪ್ರತಿನಿಧಿಸಿ ಸ್ಪರ್ಧಿಸಿದ್ದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಅವರಿಗೆ ವಿವಿಧ ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿರಿಯೂರು ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಶೋಕ್ ಹೆಂಡೇಗಾರ್, ಟಿ. ರಂಗಪ್ಪ, ಟಿ. ಮಂಜುನಾಥ್, ಸೋಮರೆಡ್ಡಿ, ಶಿವಕಗೌಡ ಕೆಂಚಲಕಾಯಿ, ಟಿ. ನಾಗರಾಜು, ಪಿ. ತಿಪ್ಪೇಸ್ವಾಮಿ, ಸಿ.ಕೆ. ಮಲ್ಲಿಕಾರ್ಜುನ್, ನವೀನಕುಮಾರ್, ಗಣೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


About The Author
Discover more from JANADHWANI NEWS
Subscribe to get the latest posts sent to your email.