*ಹಳ್ಳಿಮಕ್ಕಳಿಗೆ ಬೇಕು ಎಲ್.ಕೆ.ಜಿ/ಯು.ಕೆ.ಜಿ : ಹೆಚ್.ಹನುಮಂತಪ್ಪ*
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿರೇಕಬ್ಬಿಗೆರೆ ಗೊಲ್ಲರಟ್ಟಿ, ಎಲ್.ಕೆ.ಜಿ ಮತ್ತು ಯು.ಕೆ.ಜಿ. ತರಗತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ಮಾಜಿ ರಾಜ್ಯಸಭಾ ಸದಸ್ಯರಾದ ಹೆಚ್ ಹನುಮಂತಪ್ಪನವರು ಮಕ್ಕಳಿಗೆ ಶಿಕ್ಷಣದ ಬಗ್ಗೆ ಮತ್ತು ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿದರು. ಇಂದಿನ ಮಕ್ಕಳಿಗೆ, ಪೋಷಕರಿಗೆ ಖಾಸಾಗಿ ಶಾಲೆಗಳು ಹೊರೆಯಾಗಿದ್ದು, ಸರ್ಕಾರವೇ ಎಲ್.ಕೆ.ಜಿ.& ಯು.ಕೆ.ಜಿ. ತರಗತಿ ತೆಗೆದಿರುವುದು ಸಂತಸ ತಂದಿದೆ. ಈ ಕಾರ್ಯ ಪ್ರತಿ ಸರ್ಕಾರಿ ಶಾಲೆಗಳಿಗೆ ವಿಸ್ತರಿಸಬೇಕು. ಇದರ ಸದುಪಯೋಗ ಪ್ರತಿ ಗ್ರಾಮಗಳು ಪಡೆದುಕೊಳ್ಳಬೇಕು. ಹಳ್ಳಿ ಮಕ್ಕಳು ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಗ್ರಾಮಸ್ಥರಿಗೆ ಪೋಷಕರಿಗೆ ಹಾಗೂ ಶಿಕ್ಷಕರಿಗೂ ತಮ್ಮಕಾಲಕ್ಕೂ ಈ ಕಾಲದ ಶಿಕ್ಷಣವನ್ನು ಮೆಲುಕು ಹಾಕುತ್ತ ಶಿಕ್ಷಣ ಮಾತ್ರ ಭಾರತ ದೇಶವನ್ನು ಹೊಸದಿಕ್ಕಿಗೆ ಕೊಂಡೊಯ್ಯುತ್ತದೆ ಅದಕ್ಕಾಗಿ ಎಲ್ಲರೂ ಹೆಚ್ಚು ಹೆಚ್ಚು ಓದಿನಕಡೆ ಗಮನ ಹರಿಸುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.

ಉಪ ನಿರ್ದೇಶಕರಾದ ಮಂಜುನಾಥ್ ಮಾತಾನಾಡಿ ಎಲ್. ಕೆ.ಜಿ., ಯು.ಕೆ..ಜಿ. ಕಲಿಕೆಯ ಪರಿಣಾಮದ ಸಾಧ್ಯತೆಗಳ ಬಗ್ಗೆ ವಿವರಿಸಿದರು. ಹಳ್ಳಿ ಮಕ್ಕಳಿಗೆ ಉತ್ತಮ ಕಲಿಕೆ ಸೂಕ್ತವಾಗಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಯ ಹೆಚ್ಚಳ ಆಗುವುದರ ಬಗ್ಗೆ ಗ್ರಾಮಸ್ಥರಿಗೆ ತಿಳಿ ಹೇಳಿದರು.
ಮುಖ್ಯಶಿಕ್ಷಕಿ ಡಿ.ಎಸ್. ಕಲ್ಪನ ಹಿಂದುಳಿದ ಪ್ರದೇಶಗಳಿಗೆ ಶಿಕ್ಷಣವೇ ಅಸ್ತ್ರ. ಇಲ್ಲಿನ ಪೋಷಕರು ಕಲಿಕೆಗೆ ಹೆಚ್ಚಿನ ಒತ್ತನ್ನು ನೀಡಬೇಕು. ಮುಂದೆ ಬರುವ ಕಾಲಕ್ಕೆ ನಮ್ಮ ಮಕ್ಕಳು ಹೊಂದಿಕೊಳ್ಳುವ, ಸೌಕರ್ಯಗಳಿಂದ ಬದುಕಬೇಕಾದರೆ ಶಿಕ್ಷಣ ಮಾತ್ರ ಏಕೈಕ ದಾರಿ. ಅದಕ್ಕಾಗಿ ಎಲ್ಲರೂ ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ SDMC ಅವರು ಒಂದು ಹೆಜ್ಜೆ ಮುಂದೆ ಇಟ್ಟು, LKG UKG ಬರಲಿಕ್ಕೆ ಕಾರಣಕರ್ತರಾಗಿದ್ದೀರಿ. ಜಿಲ್ಲಾಡಳಿತ, ಅಧಿಕಾರಿಗಳು, ಜಿಲ್ಲಾ ಶಿಕ್ಷಣ ಇಲಾಖೆ. ಎಸ್.ಡಿ.ಎಂ.ಸಿ. ಅಧ್ಯಕ್ಷರು & ಸದಸ್ಯರು, ಊರಿನ ಗ್ರಾಮಸ್ಥರು, ಶಿಕ್ಷಕರ ಸಹಾಯದಿಂದ ಈ ಹೊಸ ಸಾಧನೆಗೆ ಸಹಾಯ ಮಾಡಿರುವುದನ್ನು ಪ್ರಾಸ್ತಾವಿಕ ನುಡಿಗಳಲ್ಲಿ ನೆನದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಮಹಾಂತೇಶ್.ಜಿ.ಬಿ. ಖಜಾಂಚಿ ಮಲ್ಲಿಕಾರ್ಜುನ.ಎ. ಪಿ.ಡಿ.ಒ. ಕೇಶವಮೂರ್ತಿ, ನಿವೃತ್ತ ಮುಖ್ಯ ಶಿಕ್ಷಕರಾದ ವೀರಣ್ಣ, ಶಿಕ್ಷಕರ ಸಂಘದ ಪ್ರಧಾನಕಾರ್ಯದರ್ಶಿ ಹನುಮಂತಪ್ಪ ಉಪಸ್ಥಿತಿಯಿದ್ದರು.
ಸಹ ಶಿಕ್ಷಕಿ ಮಮತ. ಆರ್ ನಿರೂಪಿಸಿದರು. ಶಿಕ್ಷಕಿ ರೇಣುಕಾ ಸ್ವಾಗತಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ನಾಗರಾಜ್ ಈ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಅಣ್ಣಪ್ಪ ನಾಯಕ್, ಮಂಜುಳಾ ಎಚ್, ನಯನಕುಮಾರಿ ಹಾಗೂ ಊರಿನ ಗ್ರಾಮಸ್ಥರು ವಿದ್ಯಾರ್ಥಿಗಳು ನೆರವೇರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.