January 29, 2026
IMG-20241227-WA0204.jpg

ನಾಯಕನಹಟ್ಟಿ : ಹೋಬಳಿಯ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸ ಜೋಗಿಹಟ್ಟಿ ಗ್ರಾಮದಲ್ಲಿ ಟೊಮ್ಯಾಟೊ ಬೆಳೆ ಬೆಳೆದಿದ್ದ ರೈತನೋರ್ವ, ಜಿಟಿ ಜಿಟಿ ಸುರಿಸುತ್ತಿರುವ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಹೊಸ ಜೋಗಿಹಟ್ಟಿ ಗ್ರಾಮದ ಕಾಟಯ್ಯ ಬಿನ್ ಗೋಂದಯ್ಯ ಎಂಬ ವ್ಯಕ್ತಿ ತನ್ನ ಸರ್ವೇ ನಂಬರ್ 14ರಲ್ಲಿ 9 ಎಕರೆ ಜಮೀನಿನಲ್ಲಿ 3 ಎಕರೆ ಜಮೀನಿಗೆ ಟೊಮ್ಯಾಟೊ ಬೆಳೆದಿದ್ದು, ಉತ್ತಮ ಇಳುವರಿ ಕೂಡಾ ಬಂದಿದೆ. ಆದರೆ ಸೂಕ್ತ ಬೆಳೆ ಸಿಗದೇ ಗಿಡದಲ್ಲೇ ಟೊಮ್ಯಾಟೊ ಬೆಳೆ ಕೊಳೆತು ಹೋಗುತ್ತಿದ್ದು, ನಿಜಕ್ಕೂ ಕೂಡಾ ಲಕ್ಷಾಂತರ ಬಂಡವಾಳ ಹೂಡಿದ್ದ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹಾಕಿದ್ದ ಬಂಡವಾಳ ಕೂಡಾ ಸಿಗದೇ ರೈತ ನಷ್ಟಕ್ಕೆ ಸಿಲುಕಿದ್ದು, ಸರ್ಕಾರಕ್ಕೆ ಪರಿಹಾರಕ್ಕಾಗಿ ಡಿ.27 ಸಂಜೆ 4 ಗಂಟೆಗೆ ಆಗ್ರಹಿಸಿದ್ದಾರೆ.

ಇದೆ ವೇಳೆ ಹೊಸ ಜೋಗಿಹಟ್ಟಿ ಗ್ರಾಮದ ರೈತ ಕರಿಬಸವರಾಜ್ ಜಮೀನಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸುಮಾರು 3 ಎಕರೆ ಪ್ರದೇಶದಲ್ಲಿ ಟೊಮೊಟೊ ಸಸಿಗಳನ್ನು ಚಳ್ಳಕೆರೆಯ ನರ್ಸರಿಗಳಲ್ಲಿ ಖರೀದಿ ಮಾಡಿ ನೆಟ್ಟು, ಸಮಯಕ್ಕೆ ಸರಿಯಾಗಿ ಗೊಬ್ಬರ, ಔಷಧಿ ಸಿಂಪಡಣೆ ಮಾಡಿ ಹಣ್ಣು ಬಿಡಲು ಪ್ರಾರಂಭಿಸಿವೆ. ಆದರೆ ಮಾರುಕಟ್ಟೆಯಲ್ಲಿ 1 ಬಾಕ್ಸಿಗೆ 60 ರಿಂದ 70 ರೂಪಾಯಿಗಳ ದರ ನಿಗದಿಯಾಗಿರುವುದರಿಂದ, ಸುಮಾರು 4 ರಿಂದ 5 ಲಕ್ಷದವರೆಗೆ ಸಾಲ ಮಾಡಿ ಬೆಳೆಗೆ ಹೂಡಿಕೆ ಮಾಡಿದ್ದಾರೆ. ಬಂದಂತಹ ಹಣದಲ್ಲಿ ಸಾಲ ಮಾಡಿದ ಹಣಕ್ಕೆ ಬಡ್ಡಿ ಕಟ್ಟಲು ಸಹ ಸಾಧ್ಯವಾಗುತ್ತಿಲ್ಲ. ಅದರಲ್ಲಿ ಟೆಂಪೋ ಬಾಡಿಗೆ ತೆಗೆದರೆ ನಮಗೆ ಏನು ಉಳಿಯುವುದಿಲ್ಲವೆಂದು ತಮ್ಮ ಅಳಲನ್ನು ತೋಡಿಕೊಂಡರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading