
ಹಿರಿಯೂರು:
ಕೇಂದ್ರ ಪುರಸ್ವತ ಎನ್.ಆರ್.ಎಲ್.ಎಮ್.ನ ಸಂಜೀವಿನಿ ಯೋಜನೆಯಡಿ ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರುಗಳು, ಸಾಮಾಜಿಕ ಸೇರ್ಪಡೆ, ಆರ್ಥಿಕ ಸೇರ್ಪಡೆ, ಹಣಕಾಸು ಸೇರ್ಪಡೆ, ಒಳಗೊಳ್ಳುವಿಕೆಯನ್ನು ಕುರಿತು ವಿಶೇಷ ತರಬೇತಿ ನೀಡಲಾಗುತ್ತಿದ್ದು, ಗ್ರಾಮೀಣ ಪ್ರದೇಶದ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂಬುದಾಗಿ ಎನ್.ಆರ್.ಎಲ್.ಎಮ್.ತಾಲ್ಲೂಕಿನ ಸಂಪನ್ಮೂಲ ವ್ಯಕ್ತಿ ಕೆ. ಗಂಗಮ್ಮ ಅವರು ಹೇಳಿದರು.
ತಾಲ್ಲೂಕಿನ ಅಬ್ಬಿನಹೊಳೆ ಗ್ರಾಮದಲ್ಲಿ ಶ್ರೀ ಪ್ರತಿಸಾರ ಸಂಜೀವಿನಿ ಗ್ರಾಮ ಪಂಚಾಯಿತಿಯ ಮಟ್ಟದ ಒಕ್ಕೂಟದಿಂದ ಸಾರ್ವತ್ರಿಕ ಯೋಜನೆಯಡಿ ಮಾದರಿ ಒಕ್ಕೂಟಗಳ ದೂರದೃಷ್ಠಿ ಕುರಿತು ಪ್ರಾತ್ಯಕ್ಷಿತ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎನ್. ಆರ್. ಎಲ್. ಎಂ. ನ ಯೋಜನೆಯ ಮಹಿಳೆಯರು ಉತ್ಪಾದಿಸುವ ವಸ್ತುಗಳ ಮೌಲ್ಯವರ್ಧನೆಗೆ ಹೆಚ್ಚು ಆದ್ಯತೆಯ ಜೊತೆಗೆ ಮಹಿಳೆಯರ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದು, ಸ್ವಸಹಾಯ ಸಂಘಗಳ ಮಹಿಳೆಯರು ಇದನ್ನು ಉಪಯೋಗಿಸಿಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮೂರನೇ ಹಂತ ಒಕ್ಕೂಟದ ಪದಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಂಘದ ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಎಮ್. ಬಿ.ಕೆ. ಎಲ್. ಸಿ. ಆರ್. ಪಿ.ಪಶುಸಖಿ, ಕೃಷಿ ಸಖಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.