ನಾಯಕನಹಟ್ಟಿ:: ಗ್ರಾಮೀಣ ಪ್ರದೇಶದ ಅಸಹಾಯಕ ಕುಟುಂಬಗಳಿಗೆ ದಿನನಿತ್ಯದ ಬಳಕೆ ವಸ್ತುಗಳನ್ನ ವಿತರಣೆ ಮಾಡಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಪಿ.ಎಸ್. ಅಣ್ಣಪ್ಪ ಹೇಳಿದ್ದಾರೆ.




ಅವರು ಮಂಗಳವಾರ ನಾಯಕನಹಟ್ಟಿ ಹೋಬಳಿಯ ಜಾಗನೂರಹಟ್ಟಿ, ಮಲ್ಲೂರಹಟ್ಟಿ, ಮತ್ತು ಚಳ್ಳಕೆರೆ ತಾಲೂಕಿನ ಓಬಳಾಪುರ ತೆಪ್ಪಗೊಂಡನಹಳ್ಳಿ ಮೋದೂರು ಹಳ್ಳಿಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ
ಯೋಜನಾ ಕಚೇರಿ ಚಳ್ಳಕೆರೆ ವ್ಯಾಪ್ತಿಯ ಅಸಹಾಯಕ ಕುಟುಂಬಗಳಿಗೆ ದಿನನಿತ್ಯದ ಬಳಕೆಯ ವಸ್ತುಗಳಾದ ಹಾಸಿಗೆ, ದಿಂಬು, ಚಾಪೆ, ಉಡುಪುಗಳು ಹಾಗೂ ಅಡುಗೆ ಪಾತ್ರೆ ಸಾಮಾಗ್ರಿಗಳನ್ನು ವಿತರಣೆ ಮಾಡಿ ಮಾತನಾಡಿದರು ಅವರು ಪ್ರಸ್ತುತ ತಾಲೂಕಿನಲ್ಲಿ 40 ಜನ ಅಸಹಾಯಕರಿಗೆ ಪ್ರತಿ ತಿಂಗಳು ಒಂದು ಸಾವಿರದಂತೆ ಮಾಸಾಶನವನ್ನು ನೀಡಲಾಗುತ್ತಿದ್ದು, ಇದರ ಜೊತೆಗೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಅಗತ್ಯವಿರುವವರಿಗೆ ಶೌಚಾಲಯ ರಚನೆ, ಮನೆ ರಿಪೇರಿ ಮತ್ತು ಮನೆ ರಚನೆಯನ್ನು ಮಾಡಿಕೊಡಲಾಗುತ್ತಿದೆ. ಯಾರು ಇಲ್ಲದ ಕುಟುಂಬಕ್ಕೆ ಈ ವಾತ್ಸಲ್ಯ ಕಾರ್ಯಕ್ರಮವು ಆಶಾಕಿರಣ ವಾಗಿದ್ದು, ವೃದ್ಯಾಪದಲ್ಲಿ ಆ ಹಿರಿ ಜೀವ ನೆಮ್ಮದಿಯ ಬದುಕು ಸಾಗಿಸಬೇಕೆಂಬುದು ಪೂಜ್ಯ ಹೆಗ್ಗಡೆ ಯವರ ಈ ಕಾರ್ಯಕ್ರಮದ ಪ್ರಮುಖ ಆಶಯವಾಗಿದೆ ಎಂದು ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಶ್ರೀಯುತ ಅಣ್ಣಪ್ಪ ಸರ್ ಇವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಪಿ.ಯಶೋಧ ಮತ್ತು ಸ್ವಸಹಾಯ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.