ಚಳ್ಳಕೆರೆ ಅ.31
ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶದಲ್ಲಿ
ದೀಪಾವಳಿ ಹಬ್ಬದ ಬದಲಾಗಿ ದೀವಣಿಗೆ
ಹಬ್ಬ ಆಚರಣೆ ಮಾಡಲು ಶುಕ್ರವಾರ
ಅಮಾವಾಸ್ಯೆಯಿಂದ ಚಾಲನೆ ದೊರೆಯಲಿದೆ.
ದೀಪಾವಳಿ ಹಬ್ಬದ ಆಚರಣೆ ಇಲ್ಲಿ ಕೇವಲ
ನಗರಗಳಿಗೆ ಮಾತ್ರ ಮಾತ್ರ ಸೀಮಿತವಾಗಿದ್ದು, ಹಳ್ಳಿಗಳಲ್ಲಿ ದೀಪಾವಳಿ ಹಬ್ಬದ ಆಚರಣೆ ಅಷ್ಟಾಗಿಲ್ಲ. ದೀವಣಿಗೆ(ಎತ್ತಿನ) ಹಬ್ಬದ ಹೆಸರಿನಲ್ಲಿ ಆಚರಣೆ ಎತ್ತುಗಳಿಗೆ ಶೃಂಗಾರ ಮಾಡಿ
ಆಚರಣೆ ಮಾಡಲಾಗುತ್ತಿದೆ.
ಭಾನುವಾರ ಅಮಾವಾಸ್ಯೆ ಮುಗಿದ ನಂತರ
ಹಳ್ಳಿಗಳಲ್ಲಿ ದೀವಣಿಗೆ ಹಬ್ಬಗಳ ಸಾಲೇ ಪ್ರಾರಂಭವಾಗುತ್ತದೆ. ಒಂದೇ ದಿನ ದೀವಣಿಗೆ ಆಚರಿಸದೆ ಆಯಾ ಹಳ್ಳಿಯ ಮುಖಂಡರ ತೀರ್ಮಾನದಂತೆ ಆಯಾ ವಾರದ ದಿನ ಹಬ್ಬ ಆಚರಿಸುತ್ತಾರೆ.
ದೀವಣಿಗೆ ವಿಶೇಷ:




ಹಬ್ಬಕ್ಕೆ ಮೂರು ಮುಂಚೆ ಗೊಲ್ಲ ಸಂಪ್ರದಾಯಕ್ಕೆ ಸೇರಿದ ಇಟ್ಟಕ್ಕಿಗೌಡ ಅಡವಿಯಲ್ಲಿ ಹೂಲಗಳ ಬದುಗಳಲ್ಲಿ ದೊರೆಯುವ ತಂಗಟೆ ಹೂಗಳನ್ನು ಕಿತ್ತು ತಂದು ಮೊದಲ ದಿನ ತಂಗಟೆ(ಬಂಗಾರ) ಹೂವು ತಂದು ಗ್ರಾಮದ ಎಲ್ಲಾ ದೇವಸ್ಥಾನಗಳಿಗೆ ಮೊದಲು ಹಾಕಿ ನಂತರ ಬುಡ್ಡೆ(ಗುಡ್ಡೆ)ಕಲ್ಲಿಗೆ ಹಾಕಿದ ನಂತರ ಗ್ರಾಮಗಳ ಪ್ರತಿ ಮನೆಗಳ ಬಾಗಿಲಿಗೆ
ಚೆಲ್ಲಿ ಹೋಗುತ್ತಾರೆ.
ಹೀಗೆ ತಂಗಟೆ ಹೂವು ಚೆಲ್ಲಿದ ರಾತ್ರಿಯಿಂದ ಆಂಟಿ-ಪಿಂಟಿ ಎಂಬ ದೀಪದಾನ ಸಂಪ್ರದಾಯ ಆರಂಭವಾಗುತ್ತದೆ.ಗ್ರಾಮದ 9 ಜನ ಅಯಾಗಾರರು ಕಟ್ಟೆ ಮುಳ್ಳು ಜಾತಿಯ ಬೇಲಿ ಕಡಿದು ಈಡು (ಕಿಚ್ಚು) ಮುಳ್ಳಿನ ಗೂಡನ್ನು ಕಟ್ಟುತ್ತಾರೆ. ಗೊಲ್ಲ ಸಮುದಾಯದ ಇಟ್ಟಕ್ಕಿ ಗೌಡರು ಪೂಜೆ ನಂತರ ಮುಳ್ಳಿನ ಗೂಡಿಗೆ ಬೆಂಕಿ ಹಚ್ಚಿ ಶೃಂಗಾರಗೊಳಿಸಿದ ಎತ್ತುಗಳನ್ನು ಸುತ್ತುವರಿಸಿ ಪೂಜೆಸಲ್ಲಿಸಿ ನಂತರ
ಕಿಚ್ಚಿನ ಪೂಜೆಗೆಂದು ಮಾಡಿದ ಎಡೆಯ ಅನ್ನ
ಕಲಸಿದ ಮುಸುರೆ ತಂದು ರೈತರು ತಮ್ಮ
ಜಮೀನುಗಳಿಗೆ ಹಾಕಿದರೆ ಬೆಳೆಗೆ ಯಾವುದೇ
ಕೀಟ, ರೋಗ ಬಾಧೆ ಹಾಗೂ ಯಾವುದೇ
ದೃಷ್ಟಿ ಬೀಳುವುದಿಲ್ಲ ಜೊತೆಗೆ ಬೆಳೆಯೂ
ಉಲುಸಾಗಿ ಬರುತ್ತದೆ ಎಂಬ ನಂಬಿಕೆ ಹಳ್ಳಿಯ ರೈತರದ್ದು.
About The Author
Discover more from JANADHWANI NEWS
Subscribe to get the latest posts sent to your email.