.ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ:: ಪಟ್ಟಣದಲ್ಲಿ ಸೋಮವಾರ ಮದೀನ ಮಸೀದಿಯ ಮುಸ್ಲಿಂ ಬಾಂಧವರು ಮೆರವಣಿಗೆಯ ಮೂಲಕ ಸಮೀಪದ ಮಾಳಪ್ಪನಹಟ್ಟಿ ರಸ್ತೆಯ ಈದ್ಧಾ ಮೈದಾನದಲ್ಲಿ ನೂರಾರು ಜನ ಒಟ್ಟಿಗೆ ಸೇರಿ ಸಾಮೂಹಿಕವಾಗಿ ಪ್ರಾರ್ಥನೆಯನ್ನು ಸಲ್ಲಿಸಿದರು.



ನಿನ್ನೆ ಚಂದ್ರ ದರ್ಶನ ವಾಗಿದ್ದರಿಂದ ಇಂದು ಈದ್ ಉಲ್ ಫಿತರ್ ಆಚರಿಸಲಾಯಿತು ಈ ಹಬ್ಬವು ಸೌಹಾರ್ದತೆ ಶಾಂತಿ ಮತ್ತು ಸಮಾಜದಲ್ಲಿ ಸಮೃದ್ಧತೆ ನಿರ್ಮಿಸಲು ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ. ಹಬ್ಬ ಸ್ನೇಹ ಭ್ರಾತೃತ್ವ ಪ್ರೀತಿ ಮತ್ತು ಪರಸ್ಪರ ಗೌರವವನ್ನು ಪಸರಿಸುವ ಸಂಕೇತವಾಗಿದೆ ಮುಸ್ಲಿಂ ಬಾಂಧವರು ಒಬ್ಬರನ್ನೊಬ್ಬರು ಅಪ್ಪಿಕೊಂಡು ರಂಜಾನ್ ಶುಭಾಶಯ ಹೇಳುತ್ತಾ ಹಬ್ಬವನ್ನು ಆಚರಣೆ ಮಾಡಿದರು.
ಇದೇ ವೇಳೆ ಮದೀನ ಮಸೀದಿಯ ಗುರುಗಳಾದ ಅಬ್ದುಲ್
ಮುಬಿನ್, ಅಧ್ಯಕ್ಷರಾದ ಮಹಮ್ಮದ್ ಯೂಸುಫ್,ಉಪಾಧ್ಯಕ್ಷ ಮಹಮ್ಮದ್ ಫಯಾಜ್, ಕಾರ್ಯದರ್ಶಿ ಮಹಮ್ಮದ್ ಸನಾವುಲ್ಲಾ, ಸದಸ್ಯರಾದ ಸೈಯದ್ ಬೇಗ್, ಖುದ್ದುಸ್, ಅಘೋಷ್, ಅಯಾಜ್ ಹಾಗೂ ಸಮಸ್ತ ಮದೀನ ಮಸೀದಿಯ ಮುಸ್ಲಿಂ ಬಾಂಧವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.