ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): : ಪಟ್ಟಣದಲ್ಲಿ ತಾಲ್ಲೂಕು ಮಂಗಳವಾದ್ಯ ಕಲಾವಿದರ ಸಂಘದ ವತಿಯಿಂದ 2ನೇ ವರ್ಷದ ಶ್ರೀತ್ಯಾಗರಾಜಸ್ವಾಮಿ ಆರಾಧನಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಮಾಡಲಾಯಿತು.

ಶ್ರೀತ್ಯಾಗರಾಜ ಸ್ವಾಮಿಗಳ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ ಮಾಡಿ ವಾದ್ಯಗೋಷ್ಠಿಗಳೊಂದಿಗೆ ಪಟ್ಟಣದ ಭಾಷ್ಯಾಕಾರ ಸ್ವಾಮಿ ದೇವಾಲಯದ ಬಳಿಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.
ಶ್ರೀ ಧನುರ್ ದಾಸ ರಾಮಾನುಜ ಜೀಯರ್ ಸ್ವಾಮಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೂರದರ್ಶನ ಹಾಗೂ ಆಕಾಶವಾಣಿ ಕಲಾವಿದರುಗಳಾದ ಮೇಲುಕೋಟೆಯ ಎಂ.ಎಸ್.ಆನಂದ್,
ಎಂ.ವೈ.ನಾಗೇಶ್, ಚಾಮರಾಜನಗರದ ಆರ್.ನಾಗೇಶ್, ಮಳವಳ್ಳಿಯ ಅಭಿ ಅವರುಗಳಿಂದ ವಿಶೇಷ ವಾದ್ಯಗೋಷ್ಠಿಗಳನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ
ಎಸ್.ಕೆ.ಮಧುಚಂದ್ರ, ತಾಲ್ಲೂಕು ಮಂಗಳವಾದ್ಯ ಕಲಾವಿದರ ಸಂಘದ ಗೌರವಾಧ್ಯಕ್ಷ ಶಿವಣ್ಣ, ಅಧ್ಯಕ್ಷ ಸುರೇಶ, ಉಪಾಧ್ಯಕ್ಷ
ಮಹಾದೇವ, ಪ್ರಧಾನ ಕಾರ್ಯದರ್ಶಿ ನಟರಾಜ್, ಖಜಾಂಚಿ ಎಸ್.ಬಿ.ಹರೀಶ್, ಸಂಚಾಲಕ ಪುನೀತ್, ಪದಾಧಿಕಾರಿಗಳಾದ ಕುಮಾರ್, ರೇವಣ್ಣ, ಕೇಶವಮೂರ್ತಿ, ನಾಗೇಂದ್ರ, ಸಚಿನ್, ಜೀವನ್, ಮಂಜುನಾಥ್, ಜಗದೀಶ್, ಪ್ರತಾಪ, ಮೋಹನ್, ವಿನಯ್, ರೇವಣ್ಣ, ವಿಜಯ್, ಮಂಜಣ್ಣ, ಅಶೋಕ್, ಗೋವಿಂದ, ಮಧು, ಲೋಕೇಶ್, ಶ್ರೀನಿವಾಸ್, ಹರ್ಷ, ಪ್ರಕಾಶ್, ಮಂಜು, ಗೌತಮ್, ಅರುಣ್, ಚಂದ್ರು ಸೇರಿದಂತೆ ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.
About The Author
Discover more from JANADHWANI NEWS
Subscribe to get the latest posts sent to your email.