September 15, 2025
IMG-20241130-WA0187.jpg

ಹೊಸದುರ್ಗ ನ. 30 ಅಕ್ರಮವಾಗಿ ಗಾಂಜಾ ಸಾಗಾಟಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಗ್ರಾಮದಿಂದ ಬೆಲಗೂರು ಗ್ರಾಮದ ಕಡೆಗೆ ಹೋಗುವ ಎರಡು ಗುಡ್ಡದ ಸಂದಿ ಕಾವಲು ರಸ್ತೆಯಲ್ಲಿ ಬರುವ ಭದ್ರ ಮೇಲ್ದಡೆ ಮೇಲು ಸೇತುವೆ ಹತ್ತಿರ ಖಚಿತ ಮಾಹಿತಿ ಮೇರೆಗೆ ರಸ್ತೆ ಗಸ್ತು ನಿರ್ವಹಿಸುತ್ತಿರುವ ಸಮಯದಲ್ಲಿ ಯಾದಘಟ್ಟ ಗ್ರಾಮದ ಲೋಕೇಶ್ (25)ದ್ವಿಚಕ್ರ ವಾಹನದಲ್ಲಿ ಹಸಿರು ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ಹೂ, ತೆನೆ ಮತ್ತು ಬೀಜಗಳಿಂದ ಕೂಡಿದ ಹದಭರಿತ ಘಾಟು ವಾಸನೆಯುಳ್ಳ 972 ಗ್ರಾಂ ಒಣ ಗಾಂಜಾವನ್ನೂ ಅಕ್ರಮವಾಗಿ ಮಾರಾಟ ಮಾಡುವ ಸಲುವಾಗಿ ಸಾಗಾಣಿಕೆ ಮಾಡುತ್ತಿರುವುದು ಕಂಡುಬರುತ್ತದೆ. ನ. 29 ರಂದು ಸಂಜೆ 06.10 ಗಂಟೆಯಲ್ಲಿ ಡಾ. ಬಿ. ಮಾದೇಶ್ ಅಬಕಾರಿ ಉಪ ಆಯುಕ್ತರ ನಿರ್ದೇಶನದಂತೆ ಹಾಗೂ ಮಾರ್ಗದರ್ಶನದಲ್ಲಿ ಈದಾಳಿ ನಡೆದಿದ್ದು ಅಬಕಾರಿ ಕಾಯ್ದೆಯಡಿಯಲ್ಲಿ ಗಾಂಜಾ ಹಾಗೂ ದ್ವಿಚಕ್ರವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ .
ದಾಳಿಯಲ್ಲಿ ವನಿತಾ ಅಬಕಾರಿ ನಿರೀಕ್ಷಕಿ, ಜಿಲ್ಲಾ ವಿಚಕ್ಷಣ ದಳ ಕೆ ರಮೇಶ್ ನಾಯ್ಕ್ ಅಬಕಾರಿ ಮುಖ್ಯ ಪೇದೆ, ಜೆ ಬಸವರಾಜ ಅಬಕಾರಿ ಪೇದೆ ಹಾಗೂ ನಾಗರಾಜ್ ತೊಳಮಟ್ಟಿ ವಾಹನ ಚಾಲಕರವರು ಹಾಗೂ ಹೊಸದುರ್ಗ ವಲಯದ ಅಬಕಾರಿ ಮುಖ್ಯ ಪೇದೆ ರಂಗಸ್ವಾಮಿ ಇತರರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading