January 29, 2026
IMG-20241030-WA0230.jpg

ಚಳ್ಳಕೆರೆ ಅ.30

ದಲಿತರಿಗೆ ಕ್ಷೌರ ಮಾಡಲು ನಿರಾಕರಿದ ಕ್ಷೌರದ ಅಂಗಡಿ ಮಾಲಿಕನ ವಿರುದ್ದ ದೂರು ನೀಡಿದ ದಲಿತ ಯುವಕರಿ ಮೊಬೈಲ್ ನಲ್ಲಿ ಧಮ್ಕಿ‌ಹಾಕಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಮಹಾನಾಯಕ ದಲಿತ ಸೇನೆ ತಹಶೀಲ್ದಾರ್ ಗೆ ದೂರು ನೀಡಿದ್ದಾರೆ.

ಚಳ್ಳಕೆರೆ ತಾಲ್ಲೂಕಿನ ಕಾಲುವೆಹಳ್ಳಿ ಗ್ರಾಮದಲ್ಲಿ ಮಾದಿಗ ಸಮುದಾಯದವರಿಗೆ ಹೇರ್ ಕಟಿಂಗ್ ಮಾಡಲು ಅಲ್ಲಿನ ಗ್ರಾಮದವರು ನಿರಾಕರಣೆ ಮಾಡುತ್ತಿದ್ದು ಈ ವಿಚಾರವಾಗಿ ಪ್ರಶ್ನೆ ಮಾಡಿದ ಮಾದಿಗ ಸಮುದಾಯದ ಯುವಕನಿಗೆ ಗ್ರಾಮದ ಕೆಲವು ಜನ ಪ್ರಾಣ ಬೆದರಿಗೆ ಹಾಕಿರುತ್ತಾರೆ.ಮಾದಿಗ ಸಮುದಾಯದ ಯುವಕರ ಜೊತೆ ಮಾತನಾಡಿರುವ ಮೊಬೈಲ್ ಆಡಿಯೋದಲ್ಲಿ ಗ್ರಾಮ ಪಂಚಾಯಿತಿಯ ನೀರುಗಂಟಿ ಒಬ್ಬ ಬೆದರಿಕೆ ಹಾಕುತ್ತಿರುವುದು ಸೇರಿದಂತೆ ನಾಲ್ಕೈದು ಜನ ಗ್ರಾಮದಲ್ಲಿ ನಡೆಯುವ ಪಂಚಾಯಿತಿಗೆ ಮಾದಿಗರು ಬಾರದೇ ಹೋದರೆ ತಕ್ಕಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿರುತ್ತಾರೆ ಆ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಜೀವಂತವಾಗಿದ್ದು.ಸಂಬಂಧಪಟ್ಟ ತಾವುಗಳು ಅಸ್ಪೃಶ್ಯತೆ ಆಚರಣೆ ಮಾಡುತ್ತಿರುವ ಹಾಗೂ ಮಾಡಲು ಕುಮ್ಮಕ್ಕು ನೀಡುವ ಮತ್ತು ಮಾದಿಗ ಸಮುದಾಯದವರಿಗೆ ಪ್ರಾಣ ಬೆದರಿಕೆ ಹಾಕಿರುವವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಕೂಡಲೆ ಅರೆಸ್ಟ್ ಮಾಡಿ ಬುದ್ಧಿ ಕಲಿಸಬೇಕು ಇಲ್ಲವಾದರೆ ಮುಂದೊಂದು ದಿನ ಬಲವಾದ ಹೋರಾಟ ಮಾಡಬೇಕಾಗುತ್ತದೆ ಎಂದು
ಮಹಾನಾಯಕ ದಲಿತ ಸೇನೆ (ರಿ) ವತಿಯಿಂದ ತಹಶೀಲ್ದಾರ್ ರವರಿಗೆ ಮನವಿ ಪತ್ರವನ್ನು ನೀಡಿದಂತ
ಸಂದರ್ಭ
ಮಹಾನಾಯಕ ದಲಿತ ಸೇನೆ ಅಧ್ಯಕ್ಷರು ಮನು ಹಾಗೂ ಉಪಾಧ್ಯಕ್ಷರು ನಾಗೇಶ್ ಹಾಗೂ ಕಾರ್ಯಧ್ಯಕ್ಷರು ಶೋಬರಾಜ್ ಹಾಗೂ ಸಂಘಟನಾ ಕಾರ್ಯಧ್ಯಕ್ಷರು ಬಾಬು ಹಾಗೂ ಉಪಸ್ಥಿತರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading