ಚಳ್ಳಕೆರೆ: ದೇಶ ಕಂಡ ಅಪ್ರತಿಮ ಸಿನಿಮಾ ನಟರಲ್ಲಿ ಪುನೀತ್ ರಾಜಕುಮಾರ್ ಅಗ್ರಗಣ್ಯರಾಗಿದ್ದು ಅವರ ನಟನೆ ಹಾಗೂ
ಸಾಮಾಜಿಕ ಸೇವೆಯಿಂದ ಜನರಮನಸ್ಸಿನಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ನಗರಸಭೆ ಅಧ್ಯಕ್ಷೆ ಜೈ ತುಂಬಿ ಅಭಿಪ್ರಾಯಪಟ್ಟರು.
ನಗರದ ಚಿತ್ರದುರ್ಗ ರಸ್ತೆಯ ಪುನೀತ್ ರಾಜಕುಮಾರ್ ವೃತ್ತದ ಬಳಿ ಇಂದು ಮೂರನೇ ವರ್ಷದ ಪುಣ್ಯಸ್ಮರಣೆ
ಅ೦ಗವಾಗಿ ಅಭಿಮಾನಿಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ
ಪಾಲ್ಗೊಂಡು ಪುನೀತ್ ರಾಜಕುಮಾರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಪುನೀತ್ ರಾಜಕುಮಾ ರವರು ಅಗಲಿ ಮೂರು ವರ್ಷಗಳು ಕಳೆದಿದ್ದರೂ ಅವರ
ಸಾಮಾಜಿಕ ಸೇವೆಗಳು ನೂರು ವರ್ಷ ಸಾರ್ವಜನಿಕರ ಮನಸ್ಸಿನಲ್ಲಿ
ಉಳಿಯುತ್ತವೆ. ಅವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಂಡು ಉತ್ತಮ ಜೀವನ ನಡೆಸಬೇಕು. ಪುನೀತ್
ರಾಜಕುಮಾರ್ ಪುತ್ತಳಿ ನಿರ್ಮಾಣ ಮಾಡಲು ನಗರಸಭೆ
ಈಗಾಗಲೇ ತೀರ್ಮಾನ ಕೈಗೊಂಡಿದ್ದು ಅತಿ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಗರ ಸಭೆ ಸದಸ್ಯ ವಿ.ವೈ.ಪ್ರಮೋದ್ ಮಾತನಾಡಿ, ಪುನೀತ್ರಾಜಕುಮಾರ್ ಒಬ್ಬ ಸಾಮಾಜಿಕ ಕಳಕಳಿ ವ್ಯಕ್ತಿಯಾಗಿದ್ದರು
ಯಾವುದೇ ಜಾತಿ ಧರ್ಮ ನೋಡದೆ ಅವರ ನಿಸ್ವಾರ್ಥ ಸೇವೆಯಿಂದ ಇಡೀ ದೇಶದಲ್ಲಿಯೇ ಮನೆ ಮಾತಾಗಿದ್ದಾರೆ
ದೈಹಿಕವಾಗಿ ಅವರೆಲ್ಲದಿದ್ದರೂ ಮಾನಸಿಕವಾಗಿ ಕನ್ನಡಿಗರ
ಹೃದಯದಲ್ಲಿ ಸದಾ ನೆಲೆಸಿರುತ್ತಾರೆ ಪುನೀತ್ ರಾಜಕುಮಾರ್
ರವರನ್ನು ಕೇವಲ ಅಭಿಮಾನಿಗಳು ಆರಾಧಿಸದೆ ಇಡೀ
ಕರ್ನಾಟಕದ ಜನರೇ ಆರಾಧಿಸುವತ್ತಾಗಿದೆ. ಇಂತಹ ವ್ಯಕ್ತಿ
ಮತ್ತೊಮ್ಮೆ ಕರುನಾಡಿನಲ್ಲಿ ಹುಟ್ಟಿ ಬರಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ನಗರ ಸಭೆ ಉಪಾಧ್ಯಕ್ಷ ಸುಜಾತ ನಗರಸಭೆ
ಸದಸ್ಯರಾದ ಶ್ರೀನಿವಾಸ್ ಮಲ್ಲಿಕಾರ್ಜುನ ಜೆಡಿಎಸ್ ತಾಲೂಕು
ಅಧ್ಯಕ್ಷ ಪಿಟಿ ತಿಪ್ಪೇಸ್ವಾಮಿ ಮಾತನಾಡಿದರು.
ಈ ಸಂದರ್ಭದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದ
ಗೌರವಾಧ್ಯಕ್ಷ ಭೋಜರಾಜ ಆರ್ ಪ್ರಸನ್ನ ಕುಮಾರ್ ಚೇತನ್
ಕುಮಾರ್ ಡಿ ಜೆ ವೆಂಕಟೇಶ್ ದಯಾನಂದ ಮೂರ್ತಿ ಚಿಕ್ಕಪಾಪಣ್ಣ
ಏಕಾಂತ ಮನೋ ದೊರೆ ಬೇಕರಿ ಮಂಜಣ್ಣ ಸೇರಿದಂತೆ ಹಲವರು
ಉಪಸ್ಥಿತರಿದ್ದರು.






About The Author
Discover more from JANADHWANI NEWS
Subscribe to get the latest posts sent to your email.