ಚಳ್ಳಕೆರೆ ಸೆ.30 ನಿಯಮಗಳನ್ನು ಗಾಳಿಗೆ ತೂರಿ 15ನೇ ಹಣಕಾಸು ಅನುದಾನ ದುರ್ಬಳಕೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಅಬ್ಬೇನಹಳ್ಳಿಗ್ರಾಮ ಪಂಚಾಯಿತಿಯ ಗ್ರಾಮಗಳಅಭಿವೃದ್ಧಿಗೆಂದು ಬಂದ 2023-24, 2024-25, 2025-26 ನೇಸಾಲಿನಲ್ಲಿ 15 ನೇ ಹಣಕಾಸು ಅನುದಾವನ್ನು ಸಾಮಗ್ರಿ ಖರಿದಿ ಹೆಸರಿನಲ್ಲಿ ಚೆಕ್ ಮೂಲಕ ಅಂಗಡಿಯವರ ಹಣ ನೀಡಿ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಸಾಮಗ್ರಿ ಖರೀದಿ ಹೆಸರಿನಲ್ಲಿ ಹಾಕಿ ಸಾಮಗ್ರಿ ಪಡೆಯದೆ ಹಣ ಪಡೆದು ಹಂಚಿಕೆ ಮಾಡಿಕೊಂಡಿದ್ದಾರೆ ಬಗ್ಗೆ ಗಂಭೀರವಾಗಿ ಆರೋಪ ಕೇಳಿ ಬಂದಿದೆ.
ಕೆಲವು ರಾಜಕೀಯ ಮುಖಂಡರು ಸರಕಾರದ ಮಟ್ಟದಲ್ಲೇ ಕಮಿಷನ್ ನೀಡಿ ಹೆಚ್ಚುವರಿ15 ನೇ ಅನುದಾನ ಹಾಕಿಸಿಕೊಂಡು ಬಂದು
ಕುಡಿಯುವ ನೀರು.ನೈರ್ಮಲ್ಯ ಹೆಸರಿನಲ್ಲಿ ಕ್ರೀಯಾ ಯೋಜನೆ ರೂಪಿಸಿ ಸಾಮಾಗ್ರಿ ಖರಿದಿ ಹೆಸರಿನಲ್ಲಿ ಬಾರಿ ಗೋಲ್ ಮಾಲ್ ನೆಡೆಯುತ್ತಿದೆ ಎನ್ನಲಾಗಿದೆ.
ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ 15 ನೇ ಹಣಕಾಸು ಅನುದಾನ ದುರ್ಬಳಕೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ನವೀನ್ ರೆಡ್ಡಿ ತಾಲೂಕು ಪಂಚಾಯತಿ ಇಒ ಶಶಿಧರ್ ದೂರು ನೀಡಿರುವುದು ಬೆಳಕಿಗೆ ಬಂದಿದೆ.


About The Author
Discover more from JANADHWANI NEWS
Subscribe to get the latest posts sent to your email.