
ಹಿರಿಯೂರು:
ತಾಲ್ಲೂಕಿನ ಶ್ರೀಶುಭೋದಯ ಶೈಕ್ಷಣಿಕ ಸೇವಾವೃದ್ದಾಶ್ರಮದ ಹಿತೈಷಿಗಳು ಮಾರ್ಗದರ್ಶಕರು, ದಾನಿಗಳು, ಕೆ.ಪಿ.ಸಿ.ಸಿ. ಸದಸ್ಯರು ಹಾಗೂ ಕಂದಿಕೆರೆ ಗ್ರಾಮದ ಸರಳ, ಸಜ್ಜನಿಕೆ, ಸ್ನೇಹಮಯ ವ್ಯಕ್ತಿತ್ವದ ಕಂದಿಕೆರೆ ಸುರೇಶ್ ಬಾಬು ರವರ 48 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಶ್ರೀ ಶ್ರೀಶುಭೋದಯ ಆಶ್ರಮಕ್ಕೆ ದಿನಸಿ ಸಾಮಗ್ರಿಗಳನ್ನು ವ್ಯವಸ್ಥೆ ಮಾಡಿದ್ದಾರೆ ಎಂಬುದಾಗಿ ಶ್ರೀ ಶುಭೋದಯ ಸೇವಾ ವೃದ್ಧಾಶ್ರಮದ ಮುಖ್ಯಸ್ಥರಾದ ತೇಜೋಮೂರ್ತಿ ಅವರು ತಿಳಿಸಿದ್ದಾರೆ.
ಶ್ರೀಯುತ ಕಂದಿಕೆರೆಸುರೇಶ್ ಬಾಬುರವರು ಸೇವಾಮನೋಭಾವಕ್ಕೆ ಶ್ರೀಶುಭೋದಯ ಶೈಕ್ಷಣಿಕ ಸೇವಾವೃದ್ದಾಶ್ರಮದ ಸಮಿತಿ ವತಿಯಿಂದ ಹಾಗೂ ಹಿರಿಯ ವೃದ್ಧರ ಪರವಾಗಿ ಶ್ರೀಯುತ ಕಂದಿಕೆರೆ ಸುರೇಶ್ ಬಾಬುರವರಿಗೆ ಹಾಗೂ ಅವರ ಕುಟುಂಬವರ್ಗಕ್ಕೆ ದೈವಾನುಗ್ರಹ ಪ್ರಾಪ್ತಿಯಾಗಲಿ ಎಂಬುದಾಗಿ ಅವರು ಶುಭ ಹಾರೈಸಿದ್ದಾರೆ.






About The Author
Discover more from JANADHWANI NEWS
Subscribe to get the latest posts sent to your email.