ಚಳ್ಳಕೆರೆ ಮೇ30
ನಗರದಲ್ಲಿ ಎಲ್ಲೆಂದರೆಲ್ಲಿ
ಕಸ ವಿಲೇವಾರಿಯಾಗದೆ ಬಿದ್ದಿರುವುದರಿಂದ ಗೊಬ್ಬೆದ್ದು ನಾರುತ್ತಿದ್ದ ಚರಂಡಿ ಹಾಗೂ ಕಸ ಸತವಚ್ಚತೆ ಮಾಡದಿದ್ದರೆ ಸಾರ್ವಜನಿಕರೇ ಮುಂದೆ ಸುರಿಯಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ನಗರದಭೆ ಪೌರಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಗರಸಭೆ ಕಚೇರಿ ಮುಂದೆ ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು. ನಗರದಲ್ಲಿ ಎಲ್ಲೆಂದರೆಲ್ಲ ರಸ್ತೆಗಳ ಕಸ ಬಿದ್ದಿದ್ದು ಚರಂಡಿಗಳ ಸ್ವಚ್ಚತೆಯಿಲ್ಲದೆ ತ್ಯಾಜ್ಯ ನೀರು ರಸ್ತೆ ಮೇಲೆ ಹರಿಯುತ್ತಿದ್ದು ಗೊಬ್ಬು ವಾಸನೆ ಬೀರುತ್ತಿದೆ.
ಈಗಾಗಲೆ ಎರಡನೇ ಅವಧಿಗೆ ಕೋವಿಡ್ ಸೋಂಕು ಬೀತಿ ಎದುರಾಗಿದ್ದು. ಸಾಂಕ್ರಮಿಕ ರೋಗಗಳು ಹರಡುವ ಮುನ್ನ ನಗರಸಭೆ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಿ ನಗರದಲ್ಲಿನ ಕಸ ತ್ಯಾಜ್ಯ ವಿಲೆವರಿ ಮಾಡದಿದ್ದರೆ ನಗರಸಭೆ ಕಚೇರಿ ಮುಂದೆ ನಗರದಲ್ಲಿನ ಕಸ ತಂದು ಕಚೇರಿ ಮುಂದೆ ಪ್ರತಿಭಟನೆ ಮಾಡುವುದಾಗಿ ನಗರಸಭೆ ಅಧಿಕಾರಿಗಳಿಗೆ ಮಾಜಿ ನಗರಸಭೆ ಸದಸ್ಯ ಜಿ.ಟಿ.ಗೋವಿಂದರಾಜ್ ಆರೋಪಿಸಿದ್ದಾರೆ.

