January 29, 2026
IMG-20251229-WA0285.jpg

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ (ಮೈಸೂರು ಜಿಲ್ಲೆ): ಸಹಕಾರ ಸಂಘಗಳಿಂದ ಗ್ರಾಮೀಣಾಭಿವೃದ್ಧಿ ಸಾಧ್ಯವೆಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಾ.ರಾ.ನಂದೀಶ್ ಹೇಳಿದರು.

ಅವರು ಸಾಲಿಗ್ರಾಮ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು.

ಸಹಕಾರ ಸಂಘಗಳಿಂದ ದೊರೆಯುವ ಸೌಲಭ್ಯಗಳನ್ನು ರೈತರುಗಳು ಸದುಪಯೋಗಪಡಿಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದು ಕರೆ ನೀಡಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಪಡೆದಂತಹ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಸದಸ್ಯರುಗಳು ಸಂಘದ ಅಭಿವೃದ್ಧಿ ಜೊತೆಗೆ ತಾವುಗಳು ಕೂಡ ಅಭಿವೃದ್ಧಿ ಪಥದತ್ತ ಸಾಗಬೇಕು ಎಂದರು.

ಸಂಘದ ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿ ವರ್ಗದವರು ಸಂಘದ ಸದಸ್ಯರುಗಳಿಗೆ ಸಂಘದಿಂದ ದೊರೆಯುವ ಸೌಲಭ್ಯಗಳ ಮಾಹಿತಿಯನ್ನು ನೀಡಬೇಕು ಹಾಗೂ ಅವರಿಗೆ ಹೆಚ್ಚಿನ ಅನುಕೂಲವನ್ನು ಕಲ್ಪಿಸಿ ಕೊಡುವ ದೃಷ್ಟಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸತೀಶ್, ಉಪಾಧ್ಯಕ್ಷ
ಎಸ್.ಬಿ.ಮಂಜುನಾಥ್, ನಿರ್ದೇಶಕರುಗಳಾದ
ಎಸ್.ಬಿ.ಅಶೋಕ, ಪಾಪಣ್ಣ, ಕರುಣ್ ಕುಮಾರ,
ಬಾಂಬೆಮಹೇಶ್, ಟ್ರ್ಯಾಕ್ಟರ್ ಅನಂತ, ಚಂದ್ರನಾಯಕ, ಜಯರಾಮೇಗೌಡ, ರುಕ್ಮಿಣಿ, ಅಶ್ವಿನಿ, ಸಣ್ಣದೇವಮ್ಮ, ಸಿಇಒ ಎನ್.ಎಸ್.ಮಧು, ಸಿಬ್ಬಂದಿಗಳಾದ ಡಿ.ಟಿ.ಸುರೇಶ್, ಎಸ್.ಆರ್.ಶಶಿಕುಮಾರ, ರಾಮೇಗೌಡ, ಮುಖಂಡರುಗಳಾದ ಎಸ್.ವೈ.ಹೇಮಂತ್, ಬಿಡಿಎಸ್ ಸುನೀಲ್, ರಾಂಪುರ ಪುರುಷೋತ್ತಮ, ದಡದಹಳ್ಳಿ ನಟರಾಜ್, ಹೋಟೆಲ್ ರಾಮಣ್ಣ, ಸೋಮು, ಮಂಜು, ಸುರೇಶ, ನರಸಿಂಹೇಗೌಡ ಸೇರಿದಂತೆ ಹಲವರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading