ನಾಯಕನಹಟ್ಟಿ-: ಸಾಂಕ್ರಾಮಿಕ ರೋಗಗಳಿಂದ ಮುಕ್ತವಾಗಲು ಪ್ರತಿಯೊಬ್ಬರು ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಅಬ್ಬೇನಹಳ್ಳಿ ಗ್ರಾ.ಪಂ. ಪಾಪಮ್ಮ ಆನಂದಪ್ಪ ಕರೆ ನೀಡಿದರು.
ಸೋಮವಾರ ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿ ಸ್ವಚ್ಛತೆ ಮತ್ತು ಕುಡಿಯುವ ನೀರಿನ ಟ್ಯಾಂಕರ್ ಸ್ವಚ್ಛತೆಯಿಂದ ಕೂಡಿರಬೇಕು ಚರಂಡಿ ಸ್ವಚ್ಛತೆ ಸೇರಿದಂತೆ ಕುಡಿಯುವ ನೀರಿನ ಅಭಾವ ಆಗದಂತೆ ಎಚ್ಚರಿಕೆ ವಹಿಸಬೇಕೆಂದರೆ ಸಿಬ್ಬಂದಿಗಳಿಗೆ ಖಡಕ್ ಸೂಚನೆ ನೀಡಿದರು.
ಉಪಾಧ್ಯಕ್ಷೆ ಶ್ರೀಮತಿ ಅನಿತಮ್ಮ ಜಿ.ಎಂ. ಜಯಣ್ಣ ಮಾತನಾಡಿದರು ಆರೋಗ್ಯಕರ ಜೀವನ ನಡೆಸಲು ಪ್ರತಿಯೊಬ್ಬರಿಗೂ ಸ್ವಚ್ಛತೆ ತುಂಬಾ ಮಹತ್ವವಾದದ್ದು ಆದ್ದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವಂತೆ ಸಿಬ್ಬಂದಿಗಳಿಗೆ ತಿಳಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಕೆ.ಸಿ. ರಾಧಾ ಎಪಿ ರೇವಣ್ಣ,ಕವಿತ, ಪಡ್ಲಬೋರಯ್ಯ, ಟಿ. ಶೇಖರಪ್ಪ, ಸಣ್ಣೋಬಯ್ಯ, ಪಿ.ಟಿ. ನಾಗರಾಜ್, ಗಜೇಂದ್ರ, ಕೆ.ಜಿ. ತಿಪ್ಪೇಸ್ವಾಮಿ, ಮಾರಕ್ಕ, ಸುಮಿತ್ರಮ್ಮ, ಬೋರಮ್ಮ,ಬಿ ಗುಂಡಪ್ಪ, ಸೇರಿದಂತೆ
ಪಿಡಿಒ ಈಶ್ವರಪ್ಪ, ಕಾರ್ಯದರ್ಶಿ ಚಂದ್ರಪ್ಪ, ಡಾಟಾ ಎಂಟ್ರಿ ಈಶ್ವರಪ್ಪ, ಬಿಲ್ ಕಲೆಕ್ಟರ್ ಶೇಖರಪ್ಪ, ಎಸ್
ಶಿವತಿಪ್ಪೇಸ್ವಾಮಿ, ಸುನಿಲ್, ನೀರಗಂಟಿಗಳಾದ ತಿಪ್ಪೇಸ್ವಾಮಿ ಪಾಲಯ್ಯ, ತಿಪ್ಪೇಶ್, ಎಸ್ಪಿ ಸುನಂದ, ಸಣ್ಣ ಬೋರಯ್ಯ, ಮಂಜುನಾಥ್, ಸೂರಯ್ಯ, ಇದ್ದರು
About The Author
Discover more from JANADHWANI NEWS
Subscribe to get the latest posts sent to your email.