ನಾಯಕನಹಟ್ಟಿ : ಹೋಬಳಿಯ ಗಡಿ ಭಾಗದ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗಡಿ ಗ್ರಾಮವಾದ ಸುಲ್ತಾನಿಪುರ ( ಪಿಚ್ಚರಹಟ್ಟಿ) ಯಲ್ಲಿ ಹಗಲಿನಲ್ಲೇ ಹೆಗ್ಗಿಲ್ಲದೆ ಗೋಹತ್ಯೆ ನಡೆಯುತ್ತಿದ್ದರೂ ಅಧಿಕಾರಿಗಳು ನೋಡಿ, ನೋಡದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಮಾನವ ಬಂದತ್ವ ವೇದಿಕೆ ಚಳ್ಳಕೆರೆ ತಾಲ್ಲೂಕು ಸಂಚಾಲಕರಾದ ಕಲ್ಲಹಳ್ಳಿ ಯನ್ನಪ್ಪ ಆರೋಪಿಸಿದರು.
ನಂತರ ಮಾತನಾಡಿದ ಅವರು ಕೇಂದ್ರ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದರೂ ಕೂಡ, ಕೂಡ್ಲಿಗಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಹಗಲಿನಲ್ಲೇ ಹೆಗ್ಗಿಲ್ಲದೆ ಗೋಹತ್ಯೆ ನಡೆಯುತ್ತಿದ್ದರೂ ಅದನ್ನು ತಡೆಯುವ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಸೂಚನೀಯ ಸಂಗತಿ.
ಕೂಡ್ಲಿಗಿ ತಾಲ್ಲೂಕಿನ ಸುಲ್ತಾನಿಪುರ, ಹುರುಳಿಹಾಳು, ನಿಂಗನಹಳ್ಳಿ, ಚಿರತಗುಂಡು, ತಾಯಕನಹಳ್ಳಿ, ಚಿಕ್ಕಜೋಗಿಹಳ್ಳಿ, ಬಣವಿಕಲ್ಲು, ಕಾನಹೊಸಹಳ್ಳಿ, ನಿಂಬಳಗೆರೆ ಗ್ರಾಮಗಳಲ್ಲಿ ಸತತವಾಗಿ ಗೋ ಹತ್ಯೆ ನಡೆಯುತ್ತಿದ್ದರೂ ಅಧಿಕಾರಿಗಳು ನೋಡದೇ ಇದ್ದಾರೆ. ಸುಲ್ತಾನಿಪುರ ಗ್ರಾಮದ ಮನೆಗಳಲ್ಲಿ ಕಸಾಯಿಖಾನೆ ಮಾಡಿಕೊಂಡು ಗೋಹತ್ಯೆ ನಡೆಯುತ್ತಿದೆ.
ಗೋಹತ್ಯೆ ಮಾಡಿದ ನಂತರ ಗೋಮಾಂಸವನ್ನು ಬೈಕುಗಳಲ್ಲಿ ಸಮೀಪದ ನಾಯಕನಹಟ್ಟಿ, ಚಳ್ಳಕೆರೆ, ಬಿಜಿಕೆರೆ ಪಟ್ಟಣಗಳಿಗೆ ಸರಬರಾಜು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಪ್ಪಿಸರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
About The Author
Discover more from JANADHWANI NEWS
Subscribe to get the latest posts sent to your email.