
ವರದಿ ಕೆ.ಟಿ. ಓಬಳೇಶ್. ನಲಗೇತನಹಟ್ಟಿ.
ನಾಯಕನಹಟ್ಟಿ: ನ.29. ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸಣ್ಣ ಕಾರ್ತಿಕೋತ್ಸವ ಶುಕ್ರವಾರ ಸಂಭ್ರಮದಿಂದ ನೆರವೇರಿತು.
ಸುಮಾರು 30 ಎತ್ತರದ ಕಮಾನಿನಾಕಾರದ ರಥ ಕಾರ್ತಿಕೋತ್ಸವದ ಪ್ರಮುಖ ಆಕರ್ಷಣೆಯಾಗಿತ್ತು.
ನಾನಾ ಬಣ್ಣದ ಬಟ್ಟೆ ಹಾಗೂ ಬಾವುಟಗಳಿಂದ ರಥ ಅಲಂಕರಿಸಲಾಗಿತ್ತು ಚಿನ್ನದ ಕಿರೀಟ ಅಳವಡಿಸಿದ್ದ ಉತ್ಸವ ಮೂರ್ತಿ ರಥೋತ್ಸವದ ಪ್ರಮುಖ ಆಕರ್ಷಣೆಯಾಗಿ ಉತ್ಸವ ಮೂರ್ತಿಯನ್ನು ದೇವಾಲಯದಿಂದ ತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಚಿನ್ನದ ಆಭರಣಗಳು ಮಲ್ಲಿಗೆ ಕನಕಾಂಬರ ಸೇವಂತಿ ಚಿಂಟು ಸೇರಿದಂತೆ ನಾನು ಹೂಗಳಿಂದ ಉತ್ಸವಮೂರ್ತಿ ಅಲಂಕರಿಸಲಾಗುತ್ತಿದೆ ಸುಮಾರು ಅರ್ಧ ಗಂಟೆಯ ಕಾಲ ದೇವರ ಅಲಂಕಾರ ಜರುಗಿತು.







ಈ ಸಂದರ್ಭದಲ್ಲಿ ಉಪಸ್ಥಿತಾರದ ದೇವಸ್ಥಾನದ ಕಾರ್ಯನಿರ್ವಾಹಣ ಅಧಿಕಾರಿ ಹೆಚ್.ಗಂಗಾಧರಪ್ಪ, ಪ.ಪಂ ಸದಸ್ಯ ಎನ್.ಮಹಂತಣ್ಣ, ದೇವಸ್ಥಾನದ ಸಿಬ್ಬಂದಿ ಸತೀಶ್, ಹಟ್ಟಿಯ ಗ್ರಾಮಸ್ಥರು, ಯುವಕರು, ಪೊಲೀಸ್ ಇಲಾಖೆ ಸಿಬ್ಬಂದಿಗಳು, ಬೆಸ್ಕಾಂ ಅಧಿಕಾರಿ ಬೋರಣ್ಣ ಇನ್ನೂ ಮುಂತಾದವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.