September 15, 2025
Screenshot_20241129_165338.png

ಚಳ್ಳಕೆರೆ ನ.29

ರಸ್ತೆ ನಿರ್ಮಿಸ್ತೀರಾ ಚರಂಡಿ ಮಾಡಲ್ಲ.ಪಾದ ಚಾರಿ ರಸ್ತೆ ಒತ್ತುವರಿ. ಬೀದಿ ನಾಯಿ ಹಸುಗಳಿಗೆ ಕಡಿವಾಣ ಹಾಕಿ ಸಮಸ್ಯೆಗಳ ಸುರಿಮಳೆ.
ಹೌದು ಇದು ಚಳ್ಳನಗರದ ನಗರಭೆ ಸಭಾಂಗಣದಲ್ಲಿ ಆಯೋಜಿಸಿ ಬಜೆಟ್ ಪೂರ್ವ ಭಾವಿ ಸಭೆಯಲ್ಲಿ ಸಮಸ್ಯೆಗಳ‌ಸುರಿಮಳೆಸಮಸ್ಯೆಗಳ ಸುರಿಮಳೆಗೈದರು.
ಮಾಜಿಪುತಸಭೆ ಅಧ್ಯಕ್ಷ ಪ್ರಭದೇವ್ ಮಾತನಾಡಿ ಪ್ರತಿ ಬಾರಿ ನಗರಸಭೆ ಬಜೆಟ್ ಪೂರ್ವಭಾವಿ ಸಭೆ ಕರೆಯುತ್ತೀರಾ ನಾವು ಹೇಳೆದ ಕೆಲಸ ಆಗಲ್ಲ ರಸ್ತೆ ನಿರ್ಮಾಣ ಮಾಡುತ್ತೀರಿ ಚರಂಡಿ ನಿರ್ಮಿಸುವುದಿಲ್ಲ ಇದರಿಂದ ರಸ್ತೆ ಚರಂಡಿ ಅಕ್ರಮಿಸಿಕೊಂಡು ಮನೆಗಳನ್ನು ನಿರ್ನಿದಿಕೊಳ್ಳುತ್ತಾರೆ ಚರಂಡಿ ನಿರ್ಮಿಸಿ ರಸ್ತೆ ಮಾಡಿ ಎಂದು ಸಲಹೆ ನೀಡಿದರು.
ಬದವರಾಜ್ ಮಾತನಾಡಿ ಆಸ್ಪತ್ರೆ ಮುಂಭಾಗ ಪೆಟ್ಟಿಗೆ ಹಾಗೂ ವಾಹನ ನಿಲುಗಡೆಯಿಂದ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತರುವ ತುರ್ತುವಾಹನಗಳಿಗೆ ಕಿರಿಕಿರಿಯಾಗುತ್ತಿದೆ ಸ್ವಚ್ಚತೆ ಇಲ್ಲದಂತಾಗಿದೆ.ನಗರದಲ್ಲಿ ಸಿಸಿ ಕ್ಯಾಮರ ಅಳವಡಿಸಿ ಪುಟ್ ಬಾತ್ ರಸ್ತೆ ತೆರವುಗೊಳಿಸಿ ಪ್ರಯಾಣಿಕರಿಗೆ ಸುಗಮಸಂಚಾರ ವ್ಯವಸ್ಥೆ ಮಾಡಿ ಮದರು.
ಆರ್.ಪ್ರಸನ್ನಕುಮಾರ್ ಮಾತನಾಡಿ ನಗರದ ಜನರು ಚುನಾವಣೆಯಲ್ಲಿ ಗೆಲ್ಲಿಸಿ ನಗರಸಭೆ ಕಳಿಸಿರುತ್ತಾರೆ ಆದರೆ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ವಿಳಂಭ .ರಸ್ತೆ ಚರಂಡಿ ಸ್ವಚ್ಚತೆಯಿಲ್ಲ ಸ್ಮಶಾನಗಳ ಅಭಿವೃದ್ಧಿಯಿಲ್ಲ ಎಂದು ಸಭೆ ಗಮನ ಸೆಳೆದರು.
ನೇತಾಜಿ ಪ್ರಸನ್ನ ಮಾತನಾಡಿ ಕಚೇರಿಯಲ್ಲಿರುವ ಬಹುತೇಕಾ ಸಿಬ್ಬಂದಿಗಳು ತಂದೆಯವರ ಅನುಕಂಪದಿಂದ ಹುದ್ದೆಗೆ ಬಂದಿದ್ದೀರಿ ನಿಮ್ಮ. ತಂದೆಯವರಿಗೆ ಒಳ್ಳೆಯದಾಗ ಬೇಕಾದರೆ ಜನರಿಗೆ ಸ್ಮಂದಿಸಿ ಕೆಲಸ ಮಾಡ..
ಇ-ಖಾತೆಗೆ ಇರುವುದು ನೂರು ಶುಲ್ಕ ನೀವು ಪಡೆಯುತ್ತಿರುವುದು ಐದು ಸಾವಿರ ರೂ ಗಿಂತ ಹೆಚ್ಚು ಹಣ ಪಡೆದರೂ ಕೆಲಸ ಆಗುತ್ತಿಲ್ಲ ಇನ್ನು ಕೆಲವರ ಪೈಲ್ ಕಳೆದಿವೆ ಎಂಬ ದೂರುಗಳು ಕೇಳಿ ಬರುತ್ತಿವೆ.
ವಿಠಲನಗರದ ಬಳಿ ಪದೇಪದೆ ಅಪಘಾತಗಳು ಸಂಬಂವಿಸುತ್ತಿದ್ದು ಅಪಘಾತ ತಡೆಗೆ ರಸ್ತೆಯಲ್ಲಿ ಗುಂಡಿ ವಿದ್ಯುತ್ ಕಂಬಗಳನ್ನು ಅಳವಡಿಸಿ ಬೀದಿ ದೀಪ ಅಳವಡಿ. ಅಭಿಶೇಖ್ ನಗರಕ್ಕೆ ಹೋಗುವ ರಸ್ತೆ ಅಭಿವೃದ್ದಿ ಪಡಿಸಿ ಎಂದು ಸಲಹೆ ನೀಡಿದರು.
ಬಜೆಟ್ ಪೂರ್ವ ಭಾವಿ ಸಭೆಯಲ್ಲಿ ಸಮಸ್ಯೆಗಳದ್ದೇ ಸದ್ದು ಮಾಡಿದವು.
ನಗರಸಭೆ ಪೌರಾಯುಕ್ತ ಮಾತನಾಡಿ ನಗರದ ಅಭಿವೃದ್ಧಿ ಹಾಗೂ ಆಧಾಯ ಬರುವಂತಹ ಸಲಹೆ ಸೂಚನೆಗಳನ್ನು ನೀಡುವಂತೆ ಸಾರ್ವನಿಕರ ಗಮನ ಸೆಳೆದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಜಯತುನ್ ಬಿ. ಉಪಾಧ್ಯಕ್ಷೆ ಸುಜಾತ. ಸದಸ್ಯರು .ನಗರದ ನಾಗರೀಕರು. ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading