
ಚಿತ್ರದುರ್ಗದ ವಿದ್ಯಾರ್ಥಿಗಳು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ವತಿಯಿಂದ ಕಾಲೇಜು ಹಂತದ ರೋವರ್ಸ್ ವಿದ್ಯಾರ್ಥಿಗಳು, ಪರಿಸರ ಸಂರಕ್ಷಣೆ ಮತ್ತು ನಶೆ ಮುಕ್ತ ಸಮಾಜದ ಜಾಗೃತಿ ನಿರ್ಮಿಸುವ ನಿಟ್ಟಿನಲ್ಲಿ ಮೂರು ದಿನಗಳ ಕಾಲ,ರೋವರ್ ವಿದ್ಯಾರ್ಥಿಗಳು, ಮೂರು ತಾಲ್ಲೂಕು ವ್ಯಾಪ್ತಿಯ 22 ಹಳ್ಳಿಗಳನ್ನು ಒಳಗೊಂಡಂತೆ, 137 ಕಿಲೋಮೀಟರ್, ಪ್ರಯಾಣ ಚಲಿಸಿ, ಪರಿಸರ ಸಂರಕ್ಷಣೆ ಹಾಗು ನಮ್ಮ ಸಮಾಜದಲ್ಲಿ ಆಗುತ್ತಿರುವ ನಶೆ ಮುಕ್ತವನ್ನಾಗಿ ಮಾಡಲು ಪ್ರತಿ ಮಾನವ ಕುಲಕ್ಕೆ ಜಾಗೃತಿ ಮೂಡಿಸುವುದಾಗಿ ಚಿತ್ರದುರ್ಗ ಜಿಲ್ಲೆಯ ಡಿವೈಎಸ್ಪಿ ದಿನಕರ್ ರವರ ಮಾರ್ಗದರ್ಶನದಂತೆ ಸೈಕಲ್ ಜಾಥ, ನಡೆಸಿದ್ದೇವೆ




ಇತ್ತೀಚಿನ ದಿನಗಳಲ್ಲಿ ಮನುಷ್ಯ ತನ್ನ ಸ್ವಾರ್ಥಕೋಸ್ಕರ ಪರಿಸರವನ್ನು ನಾಶ ಮಾಡಿ ಭೂಮಿಯನ್ನು ಬರಡು ಮಾಡುತ್ತಿದ್ದಾರೆ, ಅಲ್ಲದೆ ಇಂದಿನ ಯುವ ಪೀಳಿಗೆ ಚಿಕ್ಕ ವಯಸ್ಸಿನಲ್ಲಿ ಮಧ್ಯಪಾನ ಸೇವಿಸಿ ತಮ್ಮ ಜೀವನದ ಅಮೂಲ್ಯ ಮೌಲ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ, ಈ ಹಿನ್ನಲೆಯಲ್ಲಿ ಚಿತ್ರದುರ್ಗದ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು
ಇನ್ನು ಚಾಲನೆ ವೇಳೆ ಪೊಲೀಸ್ ಸಿಬ್ಬಂದಿಗಳು ಸಮಾಜ ಹೋರಾಟಗಾರರು ವಿದ್ಯಾರ್ಥಿಗಳು ಭಾಗಿಯಾಗಿದ್ದರು,
About The Author
Discover more from JANADHWANI NEWS
Subscribe to get the latest posts sent to your email.