
ವರದಿ : ಶಿವಮೂರ್ತಿ ಓಬಯ್ಯನಹಟ್ಟಿ
ನಾಯಕನಹಟ್ಟಿ :
ನಾಯಕನಹಟ್ಟಿ ಪಟ್ಟಣದ ಬಿಜೆಪಿ ಕಛೇರಿಯಲಿ ಪತ್ರಿಕಾಗೊಷ್ಠಿಯಲ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣರವರು ಮೊಳಕಾಲ್ಮೂರು ಕ್ಷೇತ್ರದ ನಾಯಕನಹಟ್ಟಿ ಮತ್ತು ತಳಕು ಹೋಬಳಿಯ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿಗೆ ಮೊದಲು ಸಂಸ್ಕಾರ ಕಳಿಸಿ, ಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿ ಮಾಡಿಲ್ಲಾ ಈ ಕ್ಷೇತ್ರದಲ್ಲಿ ಎಸ್ ಸಿ, ಎಸ್ ಟಿ ಜನಾಂಗದವರು ಇದ್ದು, ಚುನಾವಣೆ ಸಮಯದಲ್ಲಿ 70% ಮತದಾನ ಮಾತ್ರ ಬೇಕು, ಸಮುದಾಯದ ನಿಗಮದಿಂದ ಯಾವುದೇ ಬಡ ಜನರಿಗೆ ಯೋಜನೆಗಳು ಇಲ್ಲಿವರಿಗೂ ಸಿಕ್ಕಿಲ್ಲ, ರಾಜ್ಯದ ವಸತಿ ಸಚಿವರ ಹತ್ತಿರ ವಸತಿ ಕೇಳಿದರೆ ಹಣ ಕೊಟ್ಟರೆ ಮಾತ್ರ ವಸತಿ ಮಂಜೂರು ಮಾಡತ್ತಾರೆ, ಕ್ಷೇತ್ರದಲ್ಲಿ ನಾಯಕನಹಟ್ಟಿ ದೊಡ್ಡ ಹೋಬಳಿ ಆಗಿದ್ದು ಇಲ್ಲಿ ಸರ್ಕಾರಿ ಶಾಲಾ ಕಾಲೇಜ್ ಇಲ್ಲ, ವಸತಿ ನಿಲಯಗಳು ಇಲ್ಲ, ಸುಸಜ್ಜಿತ ರಸ್ತೆ, ದೀಪಾ, ಸಮುದಾಯ ಭವನಗಳು ಇಲ್ಲ, ಯಾವುದೇ ಪಕ್ಷ ಆಗಲಿ ಮೊದಲು ಅಭಿವೃದ್ಧಿಪಡಿಸಲು ಮುಂದಾಗಲಿ ಎಂದು ಆಗ್ರಹಿಸಿದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣರವರು ಮಾಜಿ ಶಾಸಕ ನೇರ್ಲಗುಂಟೆ ಎಸ್ ತಿಪ್ಪೇಸ್ವಾಮಿ ಮಾತಾನಾಡಿರುವುದು ಕ್ಷೇತ್ರದ ಬಿಜೆಪಿ ಮುಖಂಡರಿಗೆ ನೋವು ಉಂಟುಮಾಡಿದೆ, ಆದ್ದರಿಂದ ಮಾಜಿ ಶಾಸಕರು ಪತ್ರಿಕಾಗೊಷ್ಠಿಯಲ್ಲಿ ಮಾತಾಡಿರುವುದು ಸತ್ಯ, ಶಾಸಕ ಎನ್ ವೈ ಗೋಪಾಲಕೃಷ್ಣರವರು ಮಾಜಿ ಶಾಸಕ ವಿರುದ್ಧ ಮಾತಾನಾಡಬೇಕಿತ್ತು ಶನಿವಾರ ಪ್ರವಾಸಿ ಮಂದಿರದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಪತ್ರಿಕಾಗೊಷ್ಠಿಯಲ್ಲಿ ಮಾತಾನಾಡಿರುವುದು ಸರಿನಾ…. ಎಂದು ಮೊಳಕಾಲ್ಮೂರು ಶಾಸಕರನ್ನಾ ಪ್ರಶ್ನಸಿದರು…?
ಇದೇ ಸಂದರ್ಭದಲ್ಲಿ ಬಿಜೆಪಿ ನಿಕಟ ಪೂರ್ವ ಮಂಡಲ ಅಧ್ಯಕ್ಷ ಈ ರಾಮರೆಡ್ಡಿ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಓ ಮಂಜುನಾಥ, ಪಟ್ಟಣ ಪಂಚಾಯ್ತಿ ಸದಸ್ಯ ಎನ್ ಮಹಾಂತಣ್ಣ, ಚೌಳಕೆರೆ ಬಸಣ್ಣ, ಬೋರಸ್ವಾಮಿ, ಮಂಡಲ ಕಾರ್ಯದರ್ಶಿ ಹೆಚ್ ವಿ ಪ್ರಕಾಶ, ಮಂಡಲ ಪ್ರಧಾನ ಕಾರ್ಯದರ್ಶಿ ಬೆಂಕಿ ಗೊಂವಿದಪ್ಪ, ಮಾಜಿ ಪಟ್ಟಣ ಪಂಚಾಯ್ತಿ ಸದಸ್ಯ ನಾಗರಾಜ, ಎನ್ ತಿಪ್ಪೇಸ್ವಾಮಿ ಗುಂತಕೋಲಮ್ಮನಹಳ್ಳಿ, ಪ್ರಕಾಶ, ಬೋರಯ್ಯ, ಸೇರಿದಂತೆ ತಳಕು ಮತ್ತು ನಾಯಕನಹಟ್ಟಿ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು ಇದ್ದರು,
About The Author
Discover more from JANADHWANI NEWS
Subscribe to get the latest posts sent to your email.