ನಾಯಕನಹಟ್ಟಿ-: ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಾಡಿರಾದ್ಯಂತ ಸ್ವ ಸಹಾಯ ಸಂಘಗಳನ್ನು ಕಟ್ಟಿ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ದಾರಿ ದೀಪವಾಗಿದೆ ಎಂದು ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ತಿಳಿಸಿದರು.







ಗುರುವಾರ ಪಟ್ಟಣದ ಕಾಳಕಾದೇವಿ ದೇವಸ್ಥಾನದ ಆವರಣದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ನಾಯಕನಹಟ್ಟಿ ಹಾಗೂ ಮನಮೈನಹಟ್ಟಿ ವಲಯ ಪದಾಧಿಕಾರಿಗಳ ತರಬೇತಿ ಕಾರ್ಯಗಾರ ವೇದಿಕೆಯಲ್ಲಿ ಮಾತನಾಡಿದರು. ಸಾಮಾಜಿಕ ಸೇವೆಗಳ ಮೂಲಕ ಜೀವನದ ಸಾರ್ಥಕತೆ ಕಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆ ಅವರ ಕೊಡುಗೆ ಅಪಹಾರವಾಗಿದೆ ಮಹಿಳೆಯರಲ್ಲಿ ಶಿಕ್ಷಣದ ಜಾಗೃತಿ ಬೆಳೆಯಬೇಕು ಸಾಮಾಜಿಕವಾಗಿ ಸಂಘಟಿತರಾಗಬೇಕು ಧರ್ಮಸ್ಥಳ ಸಮಸ್ಯೆ ಮಹಿಳೆಯರ ಆರ್ಥಿಕ ಸಾವಿನೊಂದಿಗೆ ಶ್ರಮಿಸುತ್ತಿದೆ ಸಂಸ್ಥೆಯಿಂದ ಪಡೆದ ಸಾಲ ಸೌಲಭ್ಯವನ್ನು ಮಕ್ಕಳ ಶಿಕ್ಷಣಕ್ಕೆ ಬಳಕೆ ಮಾಡಿಕೊಳ್ಳಬೇಕು. ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಜಯಂತ್ ಕುಮಾರ್, ಮನುಮೈನಹಟ್ಟಿ ಮೇಲ್ವಿಚಾರಕ ಪ್ರದೀಪ್ ಹಾಗೂ ನಾಯಕನಹಟ್ಟಿ- ವಲಯ ಮೇಲ್ವಿಚಾರಕಿ ಶ್ರೀಮತಿ ಶಶಿಕಲಾ, ಹಾಗೂ ಪದಾಧಿಕಾರಿಗಳು ಮತ್ತು ಸೇವಾ ಪ್ರತಿನಿಧಿಗಳು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.