ಚಳ್ಳಕೆರೆ ಜ.28
ಅಕ್ರಮವಾಗಿ ಸೇಂದಿ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡ ಪ್ರಕರಣ ದಾಖಲು ಮಾಡಿದ್ದಾರೆ.
ಹೌದು ಇದು ಚಳ್ಳಕೆರೆ ತಾಲೂಕಿನ ಆಂದ್ರಗಡಿಭಾಗಕ್ಕೆ ಹೊಂದಿಕೊಂಡಿರುವ ಆಂದ್ರದ ತಾಳಿಕೆರೆ(ಕೆ.ಪಿ.ಕುಂಟೆ) ಗ್ರಾಮದಿಂದ ಮಲ್ಲಸಮುದ್ರ ಗ್ರಾಮಕ್ಕೆ ಬರುವ ರಸ್ತೆಯಲ್ಲಿ ಟಿ. ಸ್ವಾಮಿ ಅಲಿಯಾಸ್ ದೊಮ್ಮ, ಹಾಗೂ ನಾಗರಾಜ್ ನಾಯಕನಹಟ್ಟಿ ಪಟ್ಟಣ ಇವರು ಹೀರೋ ಪ್ಯಾಷನ್ ಪ್ರೋ ದ್ವಿಚಕ್ರ ವಾಹನದಲ್ಲಿ ಇಬ್ಬರು 21 ಪಾಸ್ಟಿಕ್ ಬಾಟಲಿಗಳಲ್ಲಿ 21 ಲೀಟರ್ 51 ಸಾವಿರ ರೂ ಮೌಲ್ಯದ ಅಕ್ರಮ ಸೇಂದಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದರಿಂದ ಸದರಿ ಆರೋಪಿತರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು
ಸದರಿ ಕಾರ್ಯಚಣೆಯಲ್ಲಿ ನಾಗರಾಜು.ಸಿ ಅಬಕಾರಿ ನಿರೀಕ್ಷಕರು, ಟಿ ರಂಗಸ್ವಾಮಿ ಅಬಕಾರಿ ಉಪ ನಿರೀಕ್ಷಕರು-1, ಡಿಟಿ ತಿಪ್ಪಯ್ಯ ಅಬಕಾರಿ ಉಪ ನಿರೀಕ್ಷಕರು -2, ಚಳ್ಳಕೆರೆ ವಲಯ ಹಾಗೂ ಮುಖ್ಯ ಪೇದೆಗಳಾದ ನಾಗರಾಜ.ಎನ್, ಟಿ. ಸೋಮಶೇಖರ, ಮಂಜುಳಮ್ಮ ಬಿ, ದರ್ಶನ್ ಕುಮಾರ್ ಸಿ, ಮತ್ತು ವಾಹನ ಚಾಲಕರಾದ ನವನೀತ್ ಮತ್ತು ಗೃಹರಕ್ಷಕ ಟಿ.ದುರುಗೇಶ್ ಭಾಗವಹಿಸಿದ್ದರು.
ಅಬಕಾರಿ ಉಪ ಆಯುಕ್ತರು ಚಿತ್ರದುರ್ಗ ರವರ ನಿರ್ದೆಶನದಂತೆ, ಅಬಕಾರಿ ಉಪ ಅಧೀಕ್ಷಕರು ಹಿರಿಯೂರು ಉಪ ವಿಭಾಗ, ಹಿರಿಯೂರು ಹಾಗೂ ಅಬಕಾರಿ ನಿರೀಕ್ಷಕರು ಚಳ್ಳಕೆರೆ ಇವರ ಮಾರ್ಗದರ್ಶನದಲ್ಲಿ. ದಾಳಿ ನಡೆದಲಾಗಿದೆ.
About The Author
Discover more from JANADHWANI NEWS
Subscribe to get the latest posts sent to your email.