ಚಳ್ಳಕೆರೆ ಅ.28 ಪಾದಚಾರಿ ರಸ್ತೆ ಅಕ್ರಮಿಸಿಕೊಂಡ ಈಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮವಾಗಿ ಶ್ಯಾಮಿನ ಹಾಕಿರಯವಯದನ್ನು ತೆರವುಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿ ಮನವಿ ನೀಡಿದ್ದಾರೆ.
ಹೌದು ಇದು ಬೆಂಗಳೂರು ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿದ್ದು ವಾಹನ ದಟ್ಟಣೆ ಹಾಗೂ ಸಂಚಾರ ಸುಗಮಕ್ಕೆ ರಸ್ತೆ ಅಗಲೀಕರ ಮಾಡಲಾಗಿದೆ .
ಬೆಂಗಳೂರು ರಸ್ತೆಯ ರಾಘವೇಂದ್ರ ಮೆಟಲ್ ಸ್ಟೋರ್ ಮಾಲಿಕರು ಪಾದಚಾರಿ ರಸ್ತೆಯನ್ನು ಅಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದು ಇದರಿಂದ ಪಾದಚಾರಿಗಳು ರಸ್ತೆ ಮೇಲೆ ಜೀವ ಭಯದಲ್ಲಿ ಓಡಾಡುವ ಪರಿಸ್ಥಿ ನಿರ್ಮಾಣ ಮಾಡಿದ್ದು ಇದರ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ಯಾಮೀಯಾನ ಹಾಕಲಾಗಿದೆ.
ಇದೇ ಸ್ಥಳದಲ್ಲಿ ಹಿರಿಯೂರು.ಕಾಪರಹಳ್ಳಿ ಮಾರ್ಗಕ್ಕೆ ಹೋಗುವ ಖಾಸಗಿ ಬಸ್ ಗಳು ನಿಲುಗಡೆಯಾಗಲಿದ್ದು ಶ್ಯಾಮಿಯಾನ ಹಾಕಿರುವುದರಿಂದ ವಾಹನ .ಪಾದಚಾರಿ ಸಂಚಾರಕ್ಕೆ ಕಿರಿಕಿರಿ ಉಂಟದರೂ ಸಹ ಸಂಬಂಧ ಪಟ್ಟ ಅಧಿಕಾರಿಗಳು ಮೌನವಹಿಸಿದ್ದಾರೆ ಎಂದು. ಕರ್ನಾಟಕ ರಕ್ಷಣಾವೇಧಿಕೆವತಿಯಿಂದ ರಸ್ತೆಯಲ್ಲಿ ಅಕ್ರಮ ಶ್ಯಾಮಿಯಾನ ಹಾಕಿರುವುದನ್ನು ತೆರವುಗೊಳಿಸುವಂತೆ ನಗರಸಭೆ ಹಾಗೂ ಪೋಲಿಸ್ ಠಾಣೆಗೆ ಲಿಖಿತವಾಗಿ ದೂರು ನೀಡಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಳಗದ ತಾಲೂಕು ಗೌರಾಧ್ಯಕ್ಷ ಸಿ .ಬೋಜರಾಜ ಅಧ್ಯಕ್ಷ. ಪಿ ಮಂಜುನಾಥ .ಪ್ರಧಾನ ಕಾರ್ಯದರ್ಶಿ ಮರಕುಂಟೆ ಚಂದ್ರಣ್ಣ ಯುವ ಘಟಕದ ಅಧ್ಯಕ್ಷ ಪಿ. ರವಿಕುಮಾರ್ ಸಂಘಟನೆ ಕಾರ್ಯದರ್ಶಿ ಮುರುಳಿ ಹಾಗೂ ಕಾರ್ಮಿಕ ಘಟಕದ ಅಧ್ಯಕ್ಷ ವಿ ಮಂಜುನಾಥ್ ಇದ್ದರು



About The Author
Discover more from JANADHWANI NEWS
Subscribe to get the latest posts sent to your email.