
ಚಳ್ಳಕೆರೆ ಫೆ.28
ರೈತರಿಗೆ ಸರಕಾರದಿಂದ ಮಂಜುರಾತಿ ನೀಡಿ ಗುರುತಿಸಿದ ಜಮೀನನ್ನು ಒಂದು ವಾರದೊಳಗೆ ಅಳತೆ ಮಾಡುವ ಮೂಲಕ ಪೋಡಿ ದುರಸ್ತರಿ ಮಾಡುವಂತೆ ತಹಶೀಲ್ದಾರ್ ರೇಹಾನ್ ಪಾಷ ಸೂಚನೆ ನೀಡಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಸರ್ವೆ ಇಲಾಖೆ ಅಧಿಕಾರಿಗಳ ಹಾಗೂ ಭೂಮಕರರಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಕಂದಾಯ ಇಲಾಖೆ
ದರಖಾಸ್ತು ಪೋಡಿ ಅಭಿಯಾನಕ್ಕೆ ಕಂದಾಯ ಸಚಿವರು ಸೂಚನೆ ನೀಡಿದ್ದು ತಾಲೂಕಿನಲ್ಲಿ ರೈತರಿಗೆ ಬಗರ್ ಹುಕುಂ ಯೋಜನೆಯಡಿ ಮಂಜುರಾತಿಯಾದ 550 ಬ್ಲಕ್ ಗಳಲ್ಲಿ137 ಸರ್ವೆನಂಬರ್ ಗಳನ್ನು ಗುರುತಿಸಿದ್ದು
ಕಂದಾಯ ಇಲಾಖೆ
ದರಖಾಸ್ತು ಪೋಡಿ ಅಭಿಯಾನ
ಕೈಗೊಂಡಿದ್ದು, ರೈತರು ಅರ್ಜಿ ಸಲ್ಲಿಸದಿದ್ದರೂ ಕಂದಾಯ
ಇಲಾಖೆಯಿಂದ ರೈತರ ಜಮೀನಿನಲ್ಲಿ ಸರ್ವೆ
ನಡೆಸಿ ಪೋಡಿ ಮಾಡಿಕೊಡಲಾಗುವುದು.
ಸರ್ಕಾರಿ
ಭೂಮಿ
ಮಂಜೂರಾತಿ
ಪಡೆದುಕೊಂಡವರ ಪೋಡಿ, ಒತ್ತುವರಿ ಸೇರಿದಂತೆ
ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡಲು
ಕಂದಾಯ ಇಲಾಖೆಯಿಂದ ಪೋಡಿ ಆಂದೋಲನ
ಕೈಗೊಳ್ಳಲಾಗಿದೆ.
12 ಜನ ಸರ್ವೆ ಸಿಬ್ಬಂದಿಗಳು ನಿಗಧಿಪಡಿಸುರುವ ರೈತರ ಜಮೀನುಗಳನ್ನು ಅಳತೆ ಮಾಡಲು ಬಂದಾಗ ಅವರೊಂದಿಗೆ ರೈತರು ಸಹಕರಿಸುವ ಮೂಲಕ ಈಸುವರ್ಣವಕಾಶನ್ನು ಸದುಪಯೋಗ ಪಡಿಸಿಕೊಳ್ಳುವಂತೆ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಭೂಮಾಪನ ಇಲಾಖೆಯ ಅಧಿಕಾರಿ ಬಾಬುರೆಡ್ಡಿ.ಶಿರಸ್ತೆದಾರ್ ಸದಾಶಿವಪ್ಪ ಇತರರಿದ್ದರು. .











About The Author
Discover more from JANADHWANI NEWS
Subscribe to get the latest posts sent to your email.