January 29, 2026
IMG-20260128-WA0085.jpg

ದೇವಸಮುದ್ರ ಗ್ರಾಮ ಪಂಚಾಯಿತಿಯಲ್ಲಿ 20ಕ್ಕೆ 20 ಸೀಟು ಗೆಲುವಿನ ವಿಶ್ವಾಸ – ಪ್ರಭಾಕರ ಮ್ಯಾಸನಾಯಕ
ಮೊಳಕಾಲ್ಮೂರು ಕ್ಷೇತ್ರದ ದೇವಸಮುದ್ರ ಗ್ರಾಮದಲ್ಲಿ ಇಂದು ನಡೆದ ಸಂಘಟನಾ ಪರ್ವದ ಅಂಗವಾಗಿ ಕಾರ್ಯಕರ್ತರ ಸಭೆ ಜರುಗಿತು. ಈ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಮುಖಂಡ ಪ್ರಭಾಕರ ಮ್ಯಾಸನಾಯಕ, ದೇವಸಮುದ್ರ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 20 ಸ್ಥಾನಗಳಿದ್ದು, ಇಪ್ಪತ್ತಕ್ಕೂ ಇಪ್ಪತ್ತು ಸೀಟುಗಳನ್ನು ಗೆಲ್ಲುವ ದೃಢಸಂಕಲ್ಪ ನಮ್ಮದಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಕಾರ್ಯಕರ್ತರು ಅದಮ್ಯ ಆತ್ಮವಿಶ್ವಾಸದೊಂದಿಗೆ, ಸಂಘಟಿತವಾಗಿ ಕೆಲಸ ಮಾಡಬೇಕು. ಪ್ರತಿ ಮನೆ, ಪ್ರತಿ ಮತದಾರರನ್ನು ಸಂಪರ್ಕಿಸಿ ಪಕ್ಷದ ಬಲವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕೆಂದು ಅವರು ಕರೆ ನೀಡಿದರು.
ಈ ಸಭೆಯಲ್ಲಿ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಶ್ರೀರಾಮರೆಡ್ಡಿ, ಉಪಾಧ್ಯಕ್ಷರಾದ ಮೂರ್ತಿ, ಹಿರಿಯ ಮುಖಂಡರಾದ ಜಿಂಕಲ್ ಬಸವರಾಜು, ಪರಮೇಶ್ವರಪ್ಪ, ಗುಂಡಪ್ಪ, ರವಿಸ್ವಾಮಿ, ಅನಿಲ್ ಕುಮಾರ್, ಬಲರಾಮ, ತಿಪ್ಪೇಸ್ವಾಮಿ, ಪಾಲಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಹರೀಶ ಪ್ರಭಾಕರ ಸೇರಿದಂತೆ ಮುಖಂಡರಾದ ತಿಮ್ಮಾರೆಡ್ಡಿ, ಹನುಮಂತು, ಶಿವಪ್ಪ, ಚಂದ್ರಣ್ಣ, ಬಸಣ್ಣ, ಹುಲ್ಲಪ್ಪ, ಸೋಮು, ಮಲ್ಲಿಕಣ್ಣ, ಬಸವರಾಜು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading