December 15, 2025
1738078554450.jpg


ಹಿರಿಯೂರು:
ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋವುಗಳ ಮೇಲಿನ ಹಿಂಸೆ ಹಾಗೂ ಗೋ ಹತ್ಯೆ ವಿರುದ್ಧ ಹಿರಿಯೂರಿನ ಹಿಂದೂ ಜಾಗರಣ ವೇದಿಕೆ ಹಾಗೂ ಗೋರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಲಾಯಿತು.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಗೋವಿನ ಕೆಚ್ಚಲು ಕಡಿದು ಅನ್ಯ ಮತೀಯರು ವಿಕೃತಿ ಮೆರೆದಿದ್ದಾರೆ. ನಂಜನಗೂಡಿನ ನಂಜುಡೇಶ್ವರ ದೇವಸ್ಥಾನಕ್ಕೆ ಹರಕೆ ರೂಪದಲ್ಲಿ ಬಿಟ್ಟ ಕರುವಿನ ಬಾಲವನ್ನು ಗೋ ಹಂತಕರು ಕಡಿದಿದ್ದಾರೆ.
ಹಿಂದೂಗಳು ಪೂಜ್ಯ ಭಾವನೆಯಲ್ಲಿ ನೋಡುವ ಗೋವುಗಳ ಮೇಲೆ ಪದೇ ಪದೇ ಹಲ್ಲೆ ಮಾಡುತ್ತಿದ್ದಾರೆ.ಇಂತಹ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿಗಳಿಗೆ ಉಗ್ರ ಶಿಕ್ಷೆ ನೀಡಬೇಕು ಎಂಬುದಾಗಿ ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಮಸ್ಕಲ್ ಶ್ರೀನಿವಾಸ್, ಎನ್.ಎಸ್.ಜೋಧ, ಗೋವಿಂದರಾಜ್, ಸತೀಶ್ ಕುಮಾರ್, ಗಂಗಾಧರಪ್ಪ, ಬಾಲಣ್ಣ ಸೇರಿದಂತೆ ಅನೇಕ ಮುಖಂಡರುಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading