January 30, 2026
IMG-20251227-WA0112.jpg

ಚಳ್ಳಕೆರೆ:
ಮಕ್ಕಳಲ್ಲಿ ಸಂಖ್ಯಾ ಜ್ಞಾನ ಹಾಗೂ ಕನ್ನಡ ಭಾಷಾ ಕೌಶಲ ವೃದ್ಧಿಗೆ ಸರ್ಕಾರ ಜಾರಿ ಮಾಡಿರುವ ಓದು ಕರ್ನಾಟಕ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದೆ ಎಂದು ಶಿಕ್ಷಣ ಸಂಯೋಜಕ ಈ. ಶಿವಪ್ಪ ಕಸವನಹಳ್ಳಿ ಹೇಳಿದರು.
ಚಳ್ಳಕೆರೆ ತಾಲೂಕಿನ ದೊಡ್ಡೇರಿ ಕ್ಲಸ್ಟರ್ ವ್ಯಾಪ್ತಿಯ ಕೆಂಚವೀರನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಓದು ಕರ್ನಾಟಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಾಥಮಿಕ ಹಂತದಲ್ಲಿಯೇ ಮಕ್ಕಳು ಸಂಖ್ಯೆಗಳ ಮೂಲಕ್ರಿಯೆಗಳನ್ನು ತಿಳಿದುಕೊಳ್ಳಬೇಕು. ಜೊತೆಗೆ ಕನ್ನಡ ಭಾಷಾ ಸಾಧನೆಗೆ ವ್ಯಾಕರಣ ಹಾಗೂ ಒತ್ತಕ್ಷರಗಳ ಮಹತ್ವವನ್ನು ಅರಿಯಬೇಕು ಎಂದು ಹೇಳಿದರು.
ನಾಲ್ಕು ಮತ್ತು ಐದನೇ ತರಗತಿಗಳು ಮಕ್ಕಳ ಗುಣಮಟ್ಟದ ಕಲಿಕೆಗೆ ಬುನಾದಿಯಾಗಿರುವುದರಿಂದ ಶಿಕ್ಷಕರು ಹೆಚ್ಚಿನ ಆಸಕ್ತಿಯಿಂದ ಮಕ್ಕಳಿಗೆ ಪಾಠ ಮಾಡಬೇಕು. ಪರಿಪೂರ್ಣ ಕಲಿಕಾ ವೃದ್ಧಿಗಾಗಿ ಶಿಕ್ಷಕರು ಮಕ್ಕಳೊಂದಿಗೆ ಮುಕ್ತವಾಗಿ ಬೆರೆತು ಕಲಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಿಆರ್‌ಪಿ ಮಲ್ಲೇಶ್, ಶಿಕ್ಷಕರಾದ ರಾಜಶೇಖರ್ ಹಾಗೂ ಬಸವರಾಜ್ ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading