September 14, 2025
FB_IMG_1732717550416.jpg


ಹಿರಿಯೂರು :
ಮಧ್ಯ ಕರ್ನಾಟಕದ ಏಕೈಕ ರೈತರ ಜೀವನಾಡಿ ವಾಣಿವಿಲಾಸ ಜಲಾಶಯದ ನೀರಿನ ಮಟ್ಟ ಮಂಗಳವಾರ 462 ಕ್ಯೂಸೆಕ್ ಇದ್ದು, ಭರ್ತಿಗೆ ಕೇವಲ 1.50 ಬಾಕಿ ಇರುವಂತೆ ಭದ್ರಾ ಡ್ಯಾಂನಿಂದ 2025 ಜನವರಿ ಅಂತ್ಯದವರೆಗೆ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲು ರಾಜ್ಯ ಸರ್ಕಾರ ಆದೇಶ ಮಾಡಿದೆ.
ಭದ್ರಾ ಜಲಾಶಯದಿಂದ ಭದ್ರಾ ಯೋಜನೆಗೆ ಹಂಚಿಕೆಯಾದ 12.50 ಟಿ.ಎಂ.ಸಿ ನೀರಿನ ಪೈಕಿ ತರೀಕೆರೆ ಏತ ನೀರಾವರಿ 1.47 ಟಿ.ಎಂ.ಸಿ ಹಾಗೂ ವಾಣಿವಿಲಾಸ ಸಾಗರಕ್ಕೆ 2 ಟಿ.ಎಂ.ಸಿಯಂತೆ ಒಟ್ಟು 3.47 ಟಿ.ಎಂ.ಸಿ ನೀರನ್ನು ಎತ್ತಲು ಅನುಮತಿ ನೀಡಲಾಗಿತ್ತು.
ವಾಣಿವಿಲಾಸ ಸಾಗರ ಜಲಾಶಯಕ್ಕೆ ಮತ್ತು ತರೀಕೆರೆ ಏತ ನೀರಾವರಿ ಯೋಜನೆಗೆ ಸೌಲಭ್ಯ ಕಲ್ಪಿಸಲು ಉಳಿದ 9.03 ಟಿ.ಎಂ.ಸಿ ನೀರಿನ ಮಿತಿಯಲ್ಲಿ ದಿನನಿತ್ಯ 700 ಕ್ಯೂಸೆಕ್ ನೀರನ್ನು ಜನವರಿ-2025ರವರೆಗೆ ಹರಿಸಲು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವನಿತಾಮಣಿ ಅವರು ನವೆಂಬರ್ 26ರಂದು ಆದೇಶ ಮಾಡಿದ್ದಾರೆ.
ಅಭಿನಂದನೆ 89 ವರ್ಷಗಳ ನಂತರ 2022ರಲ್ಲಿ ವಾಣಿವಿಲಾಸ ಸಾಗರ ಡ್ಯಾಂ ಮೊದಲ ಬಾರಿಗೆ ಕೋಡಿ ಬಿದ್ದಿತ್ತು. ಜಲಾಶಯದ ನೀರನ್ನು ಸರಿಯಾಗಿ, ವೈಜ್ಞಾನಿಕವಾಗಿ ನೀರನ್ನು ಉಪಯೋಗಿಸದೇ ವೇಸ್ಟ್ ಮಾಡಿದರು. ಅಕ್ಟೋಬರ್ ಅಂತ್ಯಕ್ಕೆ ಭದ್ರಾ ನೀರು ನಿಲ್ಲಿಸಬೇಕಿತ್ತು. ಆದರೆ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವಾದ ಡಿ.ಸುಧಾಕರ್ ಅವರ ಕಾಳಜಿಯಿಂದ ಮತ್ತೆ ಭದ್ರಾದಿಂದ ನೀರು ಹರಿಸಲು ಮುಂದುವರೆಯುವಂತೆ ಆದೇಶ ಮಾಡಿಸಿರುವುದು ಸಂತಸ ತಂದಿದೆ.
ಜನವರಿವರೆಗೂ ಪ್ರತಿದಿನ 700 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದುಬರುತ್ತಿದ್ದು, ಡಿಸೆಂಬರ್ ನಲ್ಲಿ ಡ್ಯಾಂ 3ನೇ ಬಾರಿಗೆ ಕೋಡಿ ಬೀಳಲಿದೆ. ರೈತರು ಸರಿಯಾಗಿ ನೀರು ಬಳಸಿಕೊಳ್ಳಬೇಕು.ಇಂತಹ ಮಹತ್ಕಾರ್ಯ ಮಾಡಿರುವ ಸಚಿವ ಸುಧಾಕರ್ ಅವರಿಗೆ ಕೃಷಿಕ ಸಮಾಜದ ಅಧ್ಯಕ್ಷರಾದ ಎಚ್.ಆರ್.ತಿಮ್ಮಯ್ಯ ಅವರು ರೈತರ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading