ಚಳ್ಳಕೆರೆ ಅ.27 ಮಾದಿಗ ಸಮುದಾಯದ ಆಸ್ತಿ ಅಗತ್ಯ ದಾಖಲೆಗಳನ್ನು ಪಡೆದು ಖಾತೆ.ಇ ಸ್ವತ್ತು ಮಾಡಿಕೊಡುವಂತೆ ಅಧಿಕಾರಿಗಳಿಗೆ ಶಾಸಕ ಟಿ.ರಘುಮೂರ್ತಿ ಸೂಚನೆ ನೀಡಿದರು.
ನಗರಸಭೆ ಕಚೇರಿ ಮುಂಭಾಗದ ಮುಖ್ಯ ರಸ್ತೆಯಲ್ಲಿ ಮಾದಿಗ ಮಹಾಸಭ ವತಿಯಿಂದ ನಗರದ ವಿವಿಧ ಕಡೆಯಿರುವ ಸಮುದಾಯ ಆಸ್ತಿ ರಜ್ಷಣೆಗಾಗಿ ಮೂರು ದಿನಗಳಿಂದ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದರು.
ಮಾದಿಗ ಸಮುದಾಯ ಅಸ್ತಿ ನಗರಸಭೆ ವ್ಯಾಪ್ತಿಗೆ ಬರುವುದರಿಂದ ಜಿಲ್ಲಾಧಿನಾರಿ.ನಗರಸಭೆ ಪೌರಯುತ್ತರು ಜಂಟಿಯಾಗಿ ಸ್ಥಳ ಪರಿಶೀಲನೆ ಹಾಗೂ ದಾಖಲೆ ಪರಿಶೀಲಿಸಿ ದಲಿತರ ಆಸ್ತಿ ಖಾತೆ ಹಾಗೂ ಇ ಸ್ವತ್ತು ಮಾಡಿಕೊಡಬೇಕು.
ಕ್ಷೇತ್ರದಲ್ಲಿ ಎಲ್ಲಾ ಸಮುದಾಯದವರು ಸಹೋದರಂತೆ ಜೀವನ ನಡೆಸುತ್ತಿದ್ದು ಯಾರಿಗೂ ದಕ್ಕೆಯಾಗದ ರೀತಿ ಅಧಿಕಾರಿಗಳು ಪ್ರತಿಭಟನಾ ಕಾರರಿಗೆ ನ್ಯಾಯ ಒದಗಿಸಿಕೊಡುವಂತೆ ತಿಳಿಸಿದರು.







ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ರಾಘವೇಂದ್ರ, ಬಡಗಿ ಪಾಪಣ್ಣ, ವೀರಭದ್ರ, ಬ ವೀರಭದ್ರಯ್ಯ, ವಕೀಲ ಶಶಿಧರ, ಮಾದಿಗ ಸಮುದಾಯ ಮುಖಂಡರಾದ ಶಿವಮೂರ್ತಿ, ಶ್ರೀನಿವಾಸ್, ಕೃಷ್ಣಮೂರ್ತಿ, ಶಿವಣ್ಣ, ತಿಪ್ಪೇಸ್ವಾಮಿ, ನಾಗರಾಜ್, ವಿಜಯಕುಮಾರ್, ಜಿಲ್ಲಾಧಿಕಾರಿ ವೆಂಕಟೇಶ್, ತಹಶೀಲ್ದಾರ್ ರೇಹಾನ್ ಪಾಷಾ, ನಗರಸಭೆ ಪೌರಾಯುಕ್ತ ಜಗ್ಗರೆಡ್ಡಿ, ಮಾದಿಗ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.