ಚಳ್ಳಕೆರೆ : ಶಿವರಾತ್ರಿ ಹಬ್ಬದ ಪ್ರಯುಕ್ತ ಮಹಾ ಕುಂಭಮೇಳ ಕಪ್ ಹೊನಲು ಬೆಳಕಿನ ಪಿಂಚಿಂಗ್ ಕ್ರಿಕೆಟ್ ಪಂದ್ಯಾವಳಿ ಯನ್ನು ಚಳ್ಳಕೆರೆ ಕ್ರಿಕೆಟ್ ಲವರ್ಸ್ ಹಾಗೂ ಅಶೋಕ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿತ್ತು. ಚಳ್ಳಕೆರೆ ನಗರದ ಅಶೋಕ ಸ್ಪೋರ್ಟ್ಸ್ ಕ್ಲಬ್ ಖೋಖೋ ಆವರಣದಲ್ಲಿ ಹಮ್ಮಿಕೊಂಡಿದ್ದ ಪಿಂಚಿಂಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಳ್ಳಕೆರೆ ನಗರದ 23 ತಂಡಗಳು ಭಾಗವಹಿದಿದ್ದವು. ಎರಡು ದಿನ ಹೊನಲು ಬೆಳಕಿನ ಪಿಂಚಿಂಗ್ ಕ್ರಿಕೆಟ್ ಪಂದ್ಯಾವಳಿ ಎರಡು ದಿನಗಳ ಕಾಲ ನಡೆಸಲಾಯಿತ್ತು. ಪ್ರತಿ ಪಂದ್ಯ ಆರು ಓವರ್ ಇದ್ದು ಒಂದು ತಂಡದಲ್ಲಿ 8 ಆಟಗಾರರು ಆಡಲಾಯಿಯ್ತು. ಫೈನಲ್ ಪಂದ್ಯದಲ್ಲಿ ಗ್ರೇಟ್ ವಾರಿಯರ್ ತಂಡ ಮತ್ರು ಫೈರ್ ಬಾಯ್ಸ್ ಸೆಣಸಾಟದಲ್ಲಿ
ವಾರಿಯರ್ ತಂಡ 6 ಒವರ್ ನಲ್ಲಿ 41 ರನ್ ಹೊಡೆದರು. ಫೈರ್ ಬಾಯ್ಸ್ ತಂಡ 6 ಒವರ್ ಗಳಲ್ಲಿ 22 ರನ್ ಗಳಿಸಿ ಸೋಲು ಒಪ್ಪಿಕೊಂಡಿತ್ತು. ಗ್ರೇಟ್ ವಾರಿಯರ್ ತಂಡ
ಪ್ರಥಮ ಸ್ಥಾನಗಳಿಸಿದ್ದರು. ಪ್ರಥಮ ಬಹುಮಾನ 10 ಸಾವಿರ ಮತ್ತು ಪಾರಿತೋಷಕ. ಗ್ರೇಟ್ ವಾರಿಯರ್ ತಂಡದ ಆಟಗಾರರಾದ ನಿರಂಜನ್, ಶಾಂತಕುಮಾರ, ಜಾಂಟಿ, ಹರ್ಷ, ವಂಶಿ, ಮನು, ಪ್ರಸಾದ್ ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.