
ಚಳ್ಳಕೆರೆ ಫೆ.27
ಶೃದ್ಧಾ ಭಕ್ತಿಯ ಶಿವರಾತ್ರಿ ಆಚರಣೆ
ನಗರದ ಈಶ್ವರದೇವಸ್ಥಾಮ.ಸಾಹಿಬಾಬ ಮಂದಿರ.ಕರೆಕಲ್ ಆಂಜನೇಯ ದೇವಸ್ಥಾ. ತಿಮ್ಮಪ್ಪದೇವಸ್ಥಾನ.ಶ್ರೀವೀರಭದ್ರಸ್ವಾಮಿ. ಚಳ್ಳಕೆರೆಮ್ಮ ದೇವಸ್ಥಾನ ಶ್ರೀಕನ್ನೇಶ್ವರ ದೇವಸ್ಥಾನ.ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಶಿವಲಿಂಗ ಮೆರವಣಿಗೆ ಸೇರಿದಂತೆ ತಾಲೂಕಿನಾಧ್ಯಂತ ಶ್ರದ್ದೆ ಭಕ್ತಿಯಿಂದ ಶಿವರಾತ್ರಿ ಜಾಗರಣೆ ಆರರಣೆ ಮಾಡಲಾಯಿತು.
ತಾಲೂಕಿನ ದೊಡ್ಡೇರಿ ಸಮೀಪದ ಶ್ರೀ ಕನ್ನೇಶ್ವರ ಆಶ್ರಮದಲ್ಲಿ ಬುಧವರಾ ಬೆಳಗ್ಗೆ ಗರಣಿಹಳ್ಳದಲ್ಲಿ ದೇವರುಗಳಿಗೆ ಗಂಗಾಪೂಜೆ ಯೊಂದಿಗೆ ರಾತ್ರಿ ಶ್ರೀ ಮಲ್ಲಿಕಾರ್ಜುಸ್ವಾಮಿಜಿ ಶಿವನ ವೇಶದಲ್ಲಿ ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ. ದೇವಸ್ಥಾನಗಳಿಗೆ ಹೂವಿನ ಅಲಂಕಾರ ವಿವಿಶೇಷ ಪೂಜೆ ನಡೆಸಲಾಯಿತು.
ನಗರದ ಸರಕಾರಿ ಹಿರಿಯ ಪ್ರಾಥಮಿಕಶಾಲಾ ಆವರಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಶಿವಲಿಂಗ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲಾ ಉಸ್ತುವರಿ ಸಚಿವ ಡಿಮಸುಧಾಕರ್.ಶಾಸಕ ಟಿ.ರಘುಮೂರ್ತಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುವ ಮೂಲಕ ಶಿವರಾತ್ರಿ ಆಚರಣೆ ಮಾಡಿದರು.
ಮಹಾ ಶಿವರಾತ್ರಿಯ ಶಿವ ಜಯಂತಿ ಅಂಗವಾಗಿ ಇಲ್ಲಿಯ ವಿವಿಧ ಶಿವ ದೇವಾಲಯಗಳಲ್ಲಿ ಶೃದ್ದಾ ಭಕ್ತಿಯಿಂದ ಪೂಜೆ ಅನ್ನದಾಸೋಹ ಕಾರ್ಯಕ್ರಮಗಳು ಜರುಗಿದವು.




























About The Author
Discover more from JANADHWANI NEWS
Subscribe to get the latest posts sent to your email.