January 29, 2026
IMG-20250127-WA0167.jpg

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ (ಮೈಸೂರು ಜಿಲ್ಲೆ): ತಾಲೂಕಿನ ಕರ್ಪೂರವಳ್ಳಿ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಸಾಲುಕೊಪ್ಪಲು ಗ್ರಾಮದ
ಎಸ್.ಎನ್.ರಂಗಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಉಪಾಧ್ಯಕ್ಷರಾಗಿದ್ದ ಸಿ.ಎಸ್.ಅನುಷವಿಶ್ವನಾಥ್ ತಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ
ಎಸ್.ಎನ್.ರಂಗಸ್ವಾಮಿ ಅವರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ
ಎಸ್.ಎನ್.ರಂಗಸ್ವಾಮಿ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿಯಾಗಿದ್ದ ಪಂಚಾಯತ್ ರಾಜ್ ಇಲಾಖೆಯ ಎಇಇ ವಿನುತ್ ಅಧಿಕೃತವಾಗಿ ಘೋಷಣೆ ಮಾಡಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಸ್ವಾಮಿ, ಸದಸ್ಯರುಗಳಾದ ಎಂ.ಆರ್.ಸಂತೋಷ, ರಾಂಪುರ ಲೋಕೇಶ್, ಹರ್ಷವರ್ಧನ,
ಡಿ.ಆರ್.ರಾಘವೇಂದ್ರ, ಗೌರಮ್ಮ ರಾಜಯ್ಯ, ರುಕ್ಮಿಣಿ ಶ್ರೀನಿವಾಸ್, ಜಬೀರ್ ಖಾನ್, ಡಿ.ಎಸ್.ರವಿ, ಎಸ್.ಎನ್.ರಂಗಸ್ವಾಮಿ, ಅನುಷಾ ವಿಶ್ವನಾಥ್, ಸುಜಾತ ಕೃಷ್ಣೇಗೌಡ, ಕಾಳಮ್ಮರೇವಣ್ಣ, ವಿನೋದರಮೇಶ, ಶಿವಮ್ಮ ಮಹಾದೇವ, ಪಿಡಿಓ ಪ್ರತಾಪ್ ಪಾಲ್ಗೊಂಡಿದ್ದರು.

ನೂತನ ಉಪಾಧ್ಯಕ್ಷ
ಎಸ್.ಏನ್.ರಂಗಸ್ವಾಮಿ ಮಾತನಾಡಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರುಗಳು, ಶಾಸಕ
ಡಿ.ರವಿಶಂಕರ್, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ
ದೊಡ್ಡಸ್ವಾಮೇಗೌಡರವರುಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದರು.

ಚುನಾವಣೆಯ ನಂತರ ನೂತನ ಉಪಾಧ್ಯಕ್ಷರನ್ನು ಗ್ರಾಮ ಪಂಚಾಯಿತಿ ಸದಸ್ಯರುಗಳು, ಸಿಬ್ಬಂದಿ ವರ್ಗದವರು ಹಾಗೂ ವಿವಿಧ ಮುಖಂಡರುಗಳು ಅಭಿನಂದಿಸಿದರು.

ನೂತನ ಉಪಾಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ನಾಗೇಗೌಡ, ಶಂಕರೇಗೌಡ, ಲೋಕೇಶ್, ಚಂದು, ಎಸ್.ಎಸ್.ಹೇಮಂತ್ ಕುಮಾರ್, ಮಾರ್ಕಂಡೇಗೌಡ, ಗೋಬಿಶಂಕರ್, ಎಂ.ಪಿ.ಮಂಜುನಾಥ, ರೇವಣ್ಣ, ಗುಣಪಾಲಜೈನ್, ಡಿ.ದೇವರಾಜು, ಸಂತೋಷ, ಮಂಜೇಗೌಡ, ಹೋಟೆಲ್ ರಾಮಣ್ಣ, ರಾಜೇಗೌಡ, ಕುಮಾರ, ಹೆಗ್ಗಡಿಸ್ವಾಮಿಗೌಡ, ಲಕ್ಕೇಗೌಡ, ಪಾಂಡುರಂಗ, ರಾಮೇಗೌಡ, ಶಶಿಕುಮಾರ, ಶಿವು, ನಿಂಗೇಗೌಡ, ಅಮಿತ್ ಕುಮಾರ್ ಸೇರಿದಂತೆ ಹಲವರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading