
ಚಳ್ಳಕೆರೆ : ಮಳೆಗಾಲ ಆರಂಭವಾಗಿರುವುದರಿಂದ ಎಲ್ಲೆಂದರಲ್ಲಿ ನೀರು ನಿಲ್ಲುವದರಿಂದ ಅನಾಫಿಲಸ್ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ರೋಗವು ಹರಡುವ ಸಾಧ್ಯತೆ ಇರುತ್ತದೆ. ಸಾರ್ವಜನಿಕರು ತಮ್ಮ ಮನೆಯ ಸುತ್ತ ಮುತ್ತ ಸ್ವಚ್ಚತೆ ಕಾಪಾಡಿ ಮಲೇರಿಯಾ ರೋಗ ನಿಯಂತ್ರಣಕ್ಕೆ ಕ್ರಮವಹಿಸಿ ಎಂದು ಡಾಕ್ಟರ್ ನಾಗರಾಜ್ ಹೇಳಿದ್ದರು.




ತಾಲ್ಲೂಕಿನ ಜಾಜೂರು ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಛೇರಿ ಚಿತ್ರದುರ್ಗ, ತಾಲೂಕು ಆರೋಗ್ಯ ಅಧಿಕಾರಿಗಳ ಕಛೇರಿ ಚಳ್ಳಕೆರೆ,ಪ್ರಾಥಮಿಕ ಆರೋಗ್ಯ ಕೇಂದ್ರ ಜಾಜೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ
ಮಾತನಾಡಿದ ಅವರು, 1897 ರಲ್ಲಿ ಬ್ರಿಟಿಷ್ ವಿಜ್ಞಾನಿ ಡಾಕ್ಟರ್ ರೊನಾಲ್ಟ ರಾಸ್ ಭಾರತದ ಮಿಲಿಟರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವಾಗ ಮಲೇರಿಯಾ ರೋಗವು ಸೊಳ್ಳೆಗಳಿಂದ ಹರಡುತ್ತದೆ ಎಂದು ಸೊಳ್ಳೆಗಳ ಜಠರದಲ್ಲಿ ಪ್ಲಾಸ್ಕೊಡಿಯಂ ವೈವೆಕ್ಸ್ ಎಂಬ ಪರಾವಲಂಬಿಗಳನ್ನು ಪತ್ತೆಹಚ್ಚಿದ ಕಾಲದಿಂದ ಇಂದು ಮಲೇರಿಯಾ ರೋಗದಿಂದ ಆಗುವ ಸಾವು ನೋವುಗಳನ್ನು ತಡೆಗಟ್ಟಲಾಗಿದೆ.
ಸಾರ್ವಜನಿಕರು ಮಲಗುವಾಗ ಮನೆಗಳಲ್ಲಿ ಸೊಳ್ಳೆ ಪರದೆಗಳ ಬಳಕೆ ಸೊಳ್ಳೆಬತ್ತಿ ಇಲ್ಲವೇ ದ್ರಾವಣ ರೂಪದ ಸೊಳ್ಳೆ ನಿರಾಧಕ ಧೂಪ ಲೋಭಾನ ಸಾಂಪ್ರದಾಯಿಕ ಪದ್ಧತಿಗಳಾದ ಬೇವಿನ ಸೊಪ್ಪಿನ ಹೊಗೆ ಹಾಕುವುದರಿಂದ ಮನೆಯಲ್ಲಿರುವ ಸೊಳ್ಳೆಗಳನ್ನು ಹೊಡೆದೋಡಿಸಬಹುದು ಅಲ್ಲದೆ ಮನೆ ಒಳಗಡೆ ಸೊಳ್ಳೆಗಳು ನುಗ್ಗದಂತೆ ಕಿಟಕಿಗಳಿಗೆ ಜಾಲರ ಅಳವಡಿಸುವುದರಿಂದ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಸೊಳ್ಳೆಗಳ ನಿಯಂತ್ರಣಕ್ಕಾಗಿ ಜೈವಿಕ ನಿಯಂತ್ರಣ ವಿಧಾನ ಮತ್ತು ರಾಸಾಯನಿಕ ವಿಧಾನಗಳು ಲಭ್ಯವಿದ್ದು ಆರೋಗ್ಯ ಇಲಾಖೆ ಯವರ ಸಲಹೆ ಸಹಕಾರದೊಂದಿಗೆ ಸೊಳ್ಳೆಗಳನ್ನು ನಿಯಂತ್ರಿಸಲು ಸಾಧ್ಯ. ಚಳಿ ಜ್ವರ ವಾಂತಿ ಸುಸ್ತಾಗುವಂತಹ ಲಕ್ಷಣಗಳು ಕಂಡು ಕೂಡಲೇ ರಕ್ತ ಪರೀಕ್ಷಿಸಿಕೊಂಡು ರೋಗ ಖಚಿತ ಪಟ್ಟಲ್ಲಿ ಶೀಘ್ರವೇ ಚಿಕಿತ್ಸೆ ಪಡೆದು ಸಂಪೂರ್ಣ ಗುಣ ಮುಕ್ತರಾಗಬಹುದು ಎಂದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಗ್ರಾಮಸ್ಥರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.