June 26, 2025
1750946885834.jpg


ಚಿತ್ರದುರ್ಗಜೂ.26:
ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಕರ, ಇಂತಹ ಪ್ಲಾಸ್ಟಿಕ್ ಬಳಕೆ ಬೇಡವೇ ಬೇಡ, ಪ್ರತಿಯೊಬ್ಬರು ಪ್ಲಾಸ್ಟಿಕ್ ಬಳಕೆಯನ್ನು ತಿರಸ್ಕರಿಸಬೇಕು ಎಂದು ದಾವಣಗೆರೆ ಜಿಲ್ಲಾ ಪರಿಸರ ಅಧಿಕಾರಿ ರಮೇಶ್ ನಾಯ್ಕ್ ಕರೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಬಳಿಯ ಕ್ರೀಡಾ ಭವನದ ಸಭಾಂಗಣದಲ್ಲಿ, ಗುರುವಾರ ವಿಶ್ವ ಪರಿಸರ ದಿನಾಚರಣೆ ಘೋಷವಾಕ್ಯ ‘ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು’ ಕುರಿತು, ಫ್ರೌಡಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಚಿತ್ರಕಲೆ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭೂಮಿಯ ಮೇಲೆ ಸಕಲ ಜೀವರಾಶಿಗಳಿಗೆ ಗಾಳಿ, ಬೆಳಕು, ನೀರು ಸಮಾನವಾಗಿ ದೊರಕಬೇಕು. ಮನುಷ್ಯನ ಸ್ವಾರ್ಥ ಹಾಗೂ ಅತಿ ಆಸೆಯಿಂದ ಪರಿಸರ ಇಂದು ಹಾನಿಯಾಗಿದೆ. ಶುದ್ದವಾದ ಗಾಳಿ,ಬೆಳಕು, ನೀರು ಮಲಿನಗೊಂಡಿವೆ. ಇದಕ್ಕೆ ಮುಖ್ಯ ಕಾರಣ ಪೆಟ್ರೋಲಿಯಂ ಉತ್ಪನ್ನಗಳ ದಹನ ಹಾಗೂ ಸಿಂಥಟಿಕ್ ಪ್ಲಾಸ್ಟಿಕ್ ಬಳಕೆ ಆಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಮಿತವಾದ ಬಳಕೆ ಹಾಗೂ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ ಪರಿಸರ ರಕ್ಷಣೆಗೆ ಎಲ್ಲರೂ ಒತ್ತು ನೀಡುವಂತೆ ರಮೇಶ್ ನಾಯ್ಕ್ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥ, ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಪರಿಸರ ರಕ್ಷಣೆ ಹಾಗೂ ಸ್ವಚ್ಚತೆಯ ಪರಿಕಲ್ಪನೆಯನ್ನು ಮೂಡಿಸಲಾಗುತ್ತಿದೆ. ಗಿಡ ಮರಗಳು ಪರಿಸರ ಸಮತೋಲ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳು ತಪ್ಪದೇ ಗಿಡ ಮರಗಳಿಗೆ ನೀರುಣಿಸುವ ಕೆಲಸ ಮಾಡಬೇಕು ಎಂದರು.
ನಗರ ಸಭೆ ಪರಿಸರ ಅಧಿಕಾರಿ ಜಾಫರ್ ಮಾತನಾಡಿ, ಪ್ಲಾಸ್ಟಿಕ್ ದಹನದಿಂದ ಕಾರ್ಸೋಜನಿಕ್ ಅನಿಲ ಪರಿಸರ ಸೇರುತ್ತದೆ. ಇದು ಅಪಾಯಾರಿಯಾದ ಅನಿಲವಾಗಿದ್ದು, ಮನುಷ್ಯರಲ್ಲಿ ಹಲವಾರು ಕಾಯಿಲೆಗಳಿಗೆ ಕಾರಣವಾಗುತ್ತದೆ. ಪ್ರತಿಯೊಬ್ಬರು ಮನೆಯಲ್ಲಿ ಹಸಿ ಹಾಗೂ ಓಣ ಕಸಗಳನ್ನು ಬೇರ್ಪಡಿಸಿ ಪೌರ ಕಾರ್ಮಿಕರಿಗೆ ನೀಡಬೇಕು ಎಂದರು.
ಕ್ಷೇತ್ರ ಸಂಪನ್ಮೂಲಾಧಿಕಾರಿ ಸಂಪತ್‌ಕುಮಾರ್ ಮಾತನಾಡಿ, ಪ್ರತಿಯೊಬ್ಬರು ಪ್ಲಾಸ್ಟಿಕ್ ಬಳಕೆಗೆ ಮಿತಿ ಏರಿಕೊಳ್ಳಬೇಕು. ಮನೆಯಿಂದ ತಂದ ಕ್ಯಾರಿಯರ್‌ಗಳಿಂದ ಹೋಟೆಲ್ ಅಥವಾ ಪಾನಿ ಪುರಿ ಅಂಗಡಿಗಳಿAದ ಪಾರ್ಸಲ್ ತೆಗೆದುಕೊಂಡು ಹೋಗುವುದನ್ನು ಅಭ್ಯಾಸ ಮಾಡಿಕೊಂಡರೆ, ಅನಗತ್ಯವಾಗಿ ಪ್ಲಾಸ್ಟಿಕ್ ಪರಿಸರ ಸೇರುವುದನ್ನು ತಡೆಯಬಹುದು ಎಂದರು.
ಜಿಲ್ಲಾ ಪರಿಸರಾಧಿಕಾರಿ ಆಸಿಫ್ ಖಾನ್ ಮಾತನಾಡಿ, ಪ್ಲಾಸ್ಟಿಕ್ ಉತ್ಪನ್ನಗಳನ್ನು ಕಡಿಮೆ ಬಳಸುವುದು, ಮರು ಬಳಸುವುದು, ಪುರ್ನ ಬಳಸುವುದರಿಂದ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು ಎಂದರು.
ಚಿತ್ರಕಲೆ ಸ್ಪರ್ಧೆ 278 ವಿದ್ಯಾರ್ಥಿಗಳು ಭಾಗಿ :
ಈ ಬಾರಿಯ ಪರಿಸರ ದಿನಾಚರಣೆಯ ಘೋಷವಾಕ್ಯ ‘ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು’ ಕುರಿತು ಸ್ಥಳದಲ್ಲೇ ಚಿತ್ರ ಬಿಡುಸುವ ಸ್ಪರ್ಧೆಯನ್ನು ಪರಿಸರ ಇಲಾಖೆ ಹಾಗೂ ಕಲಾ ಚೈತನ್ಯ ಸಂಸ್ಥೆ ವತಿಯಿಂದ ಆಯೋಜಿಸಲಾಯಿತ್ತು. ನಗರ 33 ವಿವಿಧ ಶಾಲೆಗಳಿಂದ ಆಗಮಿಸಿದ 278ಕ್ಕೂ ಅಧಿಕ ವಿದ್ಯಾರ್ಥಿಗಳು ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 8,9 ಹಾಗೂ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಬಹುಮಾನಗಳನ್ನು ವಿತರಿಸಲಾಯಿತು.
8ನೇ ತರಗತಿ ವಿಭಾಗದಲ್ಲಿ ಬಾಪೂಜಿ ಪ್ರೌಢಶಾಲೆ ವಿದ್ಯಾರ್ಥಿ ಶುಭಶ್ರೀ.ಎಲ್ ಸಮಾಧಾನಕರ, ಜ್ಞಾನ ಭಾರತಿ ಶಾಲೆ ಪೂರ್ವಿ.ಕೆ ತೃತೀಯ, ಪಾರ್ಶ್ವನಾಥ ಶಾಲೆ ವಿನೋದ್.ಎಂ. ದ್ವೀತಿಯ, ಸೆಂಟ್ ಜೋಸೆಫ್ ಶಾಲೆಯ ಪ್ರತಿಭಾ.ಪಿ ಪ್ರಥಮ ಬಹುಮಾನ ಗಳಿಸಿದರು.
9ನೇ ತರಗತಿ ವಿಭಾಗದಲ್ಲಿ ಕೋಟೆ ಪ್ರೌಢಶಾಲೆಯ ಜೀವನ್.ಪಿ ಸಮಾಧಾಕರ, ವಿದ್ಯಾವಿಕಾಸ ಶಾಲೆ ಸಿಂಧೂರ.ಕೆ.ವಿ ತೃತೀಯ, ಎಸ್.ಜೆ.ಎಂ. ಶಾಲೆಯ ಅನ್ವಿತಾ ಕೆ.ವಿ. ದ್ವೀತಿಯ, ಕೆ.ಕೆ.ನ್ಯಾಷಿನಲ್ ಶಾಲೆ ತೇಜಸ್ವಿನಿ.ಟಿ ಪ್ರಥಮ ಬಹುಮಾನ ಪಡೆದರು.
10ನೇ ತರಗತಿ ವಿಭಾಗದಲ್ಲಿ ಸರ್ಕಾರಿ ಪ್ರೌಢಶಾಲೆಯ ನಂದಿನಿ.ಎಸ್ ಸಮಾಧಾನಕರ, ಎಸ್.ಆರ್.ಎಸ್ ಶಾಲೆಯ ಕಿಶೋರ್.ವಿ.ಎಸ್ ತೃತೀಯ, ರಿಜನಲ್ ಇಂಗ್ಲೀಷ್ ಶಾಲೆ ಹುರಿಯಾ ಅರ್ಫನ್ ದ್ವೀತಿಯ ಬಹುಮಾನ, ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಪ್ರಿಯಾಂಕ.ಎA ಪ್ರಥಮ ಬಹುಮಾನಕ್ಕೆ ಭಾಜನಾರಾದರು. ಸಭೆಯಲ್ಲಿ ಪರಿಸರ ಸ್ನೇಹಿ ಬಟ್ಟೆ ಬ್ಯಾಗುಗಳನ್ನು ಬಿಡುಗಡೆ ಗೊಳಿಸಲಾಯಿತು.

ಉಪ ಪರಿಸರಾಧಿಕಾರಿ ರಾಜೇಶ್, ಕಲಾ ಚೈತನ್ಯ ಸಂಸ್ಥೆಯ ನಾಗರಾಜ ಬೇಂದ್ರೆ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading