ನಾಯಕನಹಟ್ಟಿ : ತಳಕು ಉಪ ವಿಭಾಗದ ಮೈಲನಹಳ್ಳಿ ಮತ್ತು ವಿಶ್ವೇಶ್ವರಪುರ 66/11 ವಿದ್ಯುತ್ ವಿತರಣಾ ಕೇಂದ್ರಗಳಿಂದ ಸರಬರಾಜು ಆಗುವ ಎಲ್ಲಾ 11ಕೆವಿ ಮಾರ್ಗಗಳಲ್ಲಿ ಶುಕ್ರವಾರ ಕೆಪಿಟಿಸಿಎಲ್ ವತಿಯಿಂದ ಎರಡನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಪ್ರಯುಕ್ತ ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೂ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ.
ತಳಕು ಹೋಬಳಿಯ ಮೈಲನಹಳ್ಳಿ, ರೇಣುಕಾಪುರ, ಓಬಳಾಪುರ, ಕಾಲುವೆಹಳ್ಳಿ, ದೊಡ್ಡ ಉಳ್ಳಾರ್ತಿ, ಘಟಪರ್ತಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ನಿರಂತರ ಜ್ಯೋತಿ, ಕೃಷಿ ಸಂಬಂದಿಸಿದಂತೆ ಎಲ್ಲ ವಿಧದ
ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ. ಹಾಗಾಗಿ ಸಾರ್ವಜನಿಕರು ಸಹಕರಿಸಬೇಕೆಂದು ಎಇಇ ಮಮತ, ಎಂಜಿನಿಯರ್ ವೆಂಕಟೇಶ್ ಮನವಿ ಮಾಡಿಕೊಂಡಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.