
ಚಳ್ಳಕೆರೆ : ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸಾಣಿಕೆರೆಯ ವೇದ ಪಿಯು ಕಾಲೇಜು 2025ನೇ ಸಾಲಿನ ಕೆಸಿಇಟಿ ಫಲಿತಾಂಶದಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸಿದೆ.



ನಮ್ಮ ಕಾಲೇಜಿನ ವಿದ್ಯಾರ್ಥಿಯಾದ ವೈಭವನ್ ಬಿಎಸ್ಸಿ -ಎಜಿ (ಪ್ರಾಯೋಗಿಕ) ವಿಭಾಗದಲ್ಲಿ 11ನೇ ರ್ಯಾಂಕ್ ಗಳಿಸುವುದರೊಂದಿಗೆ ಸಂಸ್ಥೆಗೆ ಕೀರ್ತಿ ತಂದಿರುತ್ತಾನೆ.
ಹಾಗೆಯೇ ಇಂಜಿನಿಯರ್ ವಿಭಾಗದಲ್ಲಿ ಜ್ಞಾನಸಾಗರ್- 6015 ನೇ ರ್ಯಾಂಕ್ , ಭೂಮಿಕಾ 8318ನೇ ರ್ಯಾಂಕ್ ಗಳಿಸಿ ಸಾಧನೆ ಮಾಡಿದ್ದಾರೆ.







ಈ ಸಾಧನೆಗೆ ಕಾಲೇಜಿನಲ್ಲಿ ನಡೆಸಿದ ಅಣುಕು ಪರೀಕ್ಷೆಗಳು, ಮೌಖಿಕ ಸಂದರ್ಶನ, ಪ್ರಾಯೋಗಿಕ ಪರೀಕ್ಷೆಗಳು, ಸಂಜೆ ಅವಧಿ ತರಗತಿಗಳು, ಉಪನ್ಯಾಸಕರ ಶ್ರಮ, ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯವರ ಪ್ರೋತ್ಸಾಹ ಕಾರಣವಾಗಿದ್ದು ಈ ವಿದ್ಯಾರ್ಥಿಗೆ ಸಂಸ್ಥೆಯ ಅಧ್ಯಕ್ಷರಾದ ಡಿ ಟಿ ರವೀಂದ್ರ, ಕಾರ್ಯದರ್ಶಿ ಕಿರಣ್, ಪ್ರಾಂಶುಪಾಲರಾದ ಸಂದೀಪ್ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.