ಹಿರಿಯೂರು ಏ25.ಗೆಳತಿಯರಿಬ್ಬರ ಸೈಕಲ್ ತುಳಿಯುವ ವಿಚಾರಕ್ಕೆ 11 ವರ್ಷದ ಹುಡುಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯೂರು ನಗರದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.ನಗರದ ಹರಿಶ್ಚಂದ್ರ ಘಾಟ್ ಮೇರಿ ರಸ್ತೆಯ ನಿವಾಸಿ ಶ್ರೀನಿವಾಸ ಪುತ್ರಿ ಸ್ಪಂದನ (11) ವರ್ಷ ಮೃತ ಬಾಲಕಿ ಎಂದು ಗುರುತಿಸಲಾಗಿದೆ.ಗೆಳೆತಿಯರಿಬ್ಬರು ಸೈಕಲ್ ತುಳಿಯುವ ವಿಚಾರಕ್ಕೆ ಜಗಳವಾಡಿಕೊಂಡು ಸೈಕಲ್ ಕೊಡುವುದಿಲ್ಲವೆಂದು ಕೋಪಗೊಂಡ ಮೃತ ಬಾಲಕಿ ಮನೆ ಚಿಲಕ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಶಿವಕುಮಾರ್ ಹಾಗೂ ಸಿಪಿಐ ರಾಘವೇಂದ್ರ ಕಾಂಡಿಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
About The Author
Discover more from JANADHWANI NEWS
Subscribe to get the latest posts sent to your email.