September 15, 2025
IMG-20250225-WA0160.jpg

ಚಳ್ಳಕೆರೆ ಫೆ.25.

ವಿದ್ಯುತ್ ಕಂಬಗಳಿಗೆ ಹಾಗೂ ತಂತಿಗೆ ಬಳ್ಳಿಯೇ ಆಸರೆ …
ಹೌದು ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮಪಂಚಸಯಿತಿ ವ್ಯಾಪ್ತಿಯ ರಡ್ಡಿಹಳ್ಳಿ ಸಮೀಪದ ಶಾಂತಿ ನಗರದಲ್ಲಿ ಸುಮಾರು 50 ಕುಟುಂಬಗಳು ವಾಸ ಮಾಡುತ್ತಿದ್ದು ಇಲ್ಲಿನ‌ಜನರಿಗೆ ಬೆಳಕಿನ ವ್ಯವಸ್ಥೆಗಾಗಿ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಕಂಬಗಳನ್ನು ನೆಟ್ಟು ವಿದ್ಯುತ್ ಸಂಪಕರ್ಕ ನೀಡಲಾಗಿದೆ.
ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಗಳಿಗೆ ರೈತರು ಬೇಲಿ ಹಾಕಿ ಬೀದಿ ದೀಪಗಳನ್ನು ರೈತರ ಜಮೀನುಗಳ ಕಡೆ ತಿರುಗಿಸಿರುವುದರಿಂದ ಇಲ್ಲಿನ‌ ನಿವಾಸಿಹಳು ಕತ್ತಲೆಯಲ್ಲಿ ಜೀವನ ನಡೆಸುವ ಜತೆಗೆ ವಿದ್ಯುತ್ ಕಂಬಗಳಿಗೆ ಬಳ್ಳಿಯೂ ಹಬ್ಬಿಕೊಂಡಿರುವುದರಿಂದ ಪದೇ ಪದೇ ವಿದ್ಯುತ್ ಸಮಸ್ಯೆ ಎದುರಾಗಿತ್ತಿದೆ ಈ ಸಮಸ್ಯೆ ಸುಮಾರು ಮೂರು ವರ್ಷಗಳಿಂದ ಇದ್ದರೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಸಹ ವಿದ್ಯುತ್ ಕಂಬಗಳಿಗೆ ಹಾಕಿರುವ ಬೇಲಿ ಹಾಗೂ ಕಂಬ ತಂತಿಗೆ ಹಬ್ಬರುವ ಬಳ್ಳಿ ಮಾತ್ರ ತೆರವಾಗಿಲ್ಲ‌ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಬೇಲಿ ತೆರವುಗೊಳಿಸಿ ಬಳ್ಳಿ ಸ್ವಚ್ಚತೆವಮಾಡುವರೇ ಕಾದು ನೋಡ ಬೇಕಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading