
ನಾಯಕನಹಟ್ಟಿ : ಹೋಬಳಿಯ ನೇರಲಗುಂಟೆ ಗ್ರಾಮದ ಆರಾಧ್ಯ ದೈವ ಶ್ರೀ ಬಂಗಾರೇಶ್ವರ ಮತ್ತು ಗಾದ್ರಿಪಾಲನಾಯಕ ದೇವರುಗಳಿಗೆ ಎನ್ ದೇವರಹಳ್ಳಿ ಸಮೀಪದ ಪಾಪುಮುತ್ತೆ ಹೊಳೆಯಲ್ಲಿ ಗಂಗಾ ಪೂಜೆಯನ್ನು ನೆರವೇರಿಸಲಾಯಿತು.





ನಂತರ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ನೇರಲಗುಂಟೆ ಮಾತನಾಡಿ ಎಲ್ಲಾ ದೇವಾನ್ ದೇವತೆಗಳು ಇಲ್ಲಿ ಬಂದು ಗಂಗಾ ಪೂಜೆ ಮಾಡಿಕೊಂಡು ಸ್ವಸ್ಥಾನಗಳಿಗೆ ತೆರಳುವುದು ವಾಡಿಕೆ. ಮ್ಯಾಸಮಂಡಲದಲ್ಲಿ ಮೊದಲ ದೇವರು ದಡ್ಡಿ ಸೂರನಾಯಕ. ದಡ್ಡಿ ಸೂರನಾಯಕ ದೇವರಾದ ಮೇಲೆ ಮ್ಯಾಸಮಂಡಲದಲ್ಲಿರುವ ಎಲ್ಲಾ ದೇವರುಗಳ ಕಾರ್ಯಕ್ರಮಗಳನ್ನು ನೆರವೇರಿಸಲಾಗುವುದು. ಬಂಗಾರೇಶ್ವರಿ ಮತ್ತು ಗಾದ್ರಿಪಾಲನಾಯಕ ದೇವರುಗಳು ಶಿವನ ರೂಪದಲ್ಲಿ ಭೂಮಿಗೆ ಬಂದು ನೆಲೆಸಿದ್ದಾರೆ ಎಂಬ ಪ್ರತಿತಿಯಿದೆ. ಆದ್ದರಿಂದ ಮ್ಯಾಸಮಂಡಲದ ವಿಶೇಷ ದೇವತೆಗಳನ್ನು ಕರೆತಂದು ಗಂಗಾ ಪೂಜೆ ನೆರವೇರಿಸುವುದು ನಮ್ಮ ವಾಡಿಕೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಂಗಾರೇಶ್ವರಿ ಮತ್ತು ಗಾದ್ರಿಪಾಲನಾಯಕ ದೇವರುಗಳ ಪೂಜಾರಿಗಳಾದ ರಾಘವೇಂದ್ರ, ಕಾಟಯ್ಯ, ಗಜ್ಜುಗಾನಹಳ್ಳಿ ಕನ್ನಯ್ಯ, ಪೂಜಾರಿ ಸಣ್ಣ ಬೋರಯ್ಯ, ರಾಜಣ್ಣ, ಬೊಂಬಾಯಿ ತಿಪ್ಪಯ್ಯ, ಬೋರನಾಯಕ, ಪ್ರಕಾಶ್, ಡ್ರೈವರ್ ಬೋರಯ್ಯ, ರಾಜಣ್ಣ, ರೇವಣ್ಣ, ಬಿ ಕಾಟಯ್ಯ, ಚಂದ್ರಣ್ಣ, ಸೇರಿದಂತೆ ಬಂಗಾರೇಶ್ವರಿ ಮತ್ತು ಗಾದ್ರಿಪಾಲ ನಾಯಕ ದೇವರುಗಳ ಗುಡಿ ಕಟ್ಟಿನ ಅಣ್ಣ-ತಮ್ಮಂದಿರು ಭಕ್ತಾದಿಗಳು ಸಮಸ್ತ ನೇರಲಗುಂಟೆ ಗ್ರಾಮಸ್ಥರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.