January 29, 2026
IMG-20260125-WA0349.jpg

ನಾಯಕನಹಟ್ಟಿ-:-
ನಾಯಕನಹಟ್ಟಿ ಸಮೀಪದ ನೇರಲಗುಂಟೆ ಗ್ರಾಮದಲ್ಲಿ ಭಾನುವಾರದಂದು ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರೆವೇರಿತು.ರಥೋತ್ಸವದ ಹಿನ್ನೆಯಲ್ಲಿ ಶನಿವಾರ ಗಂಗಾ ಪೂಜೆ ನೆರೆವೇರಿಸಲಾಯಿತು. ಭಾನುವಾರ ಬೆಳಿಗ್ಗೆ ಬ್ರಹ್ಮ ರಥೋತ್ಸವ ಮಧ್ಯಾಹ್ನ ದೊಡ್ಡ ರಥೋತ್ಸವ ನಡೆಯಿತು.ರಥೋತ್ಸವದ ಅಂಗವಾಗಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿದ್ದ ರಥಕ್ಕೆ ಬೃಹತ್ ಹೂವಿನ ಹಾರಗಳು ಹಾಗೂ ನಾನಾ ಬಣ್ಣದ ಧ್ವಜಗಳಿಂದ ರಥವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.ರಥಕ್ಕೆ ನೇರಲಗುಂಟೆ ಗ್ರಾಮದ ಗೊಂಚಿಗಾರ್ ವೆಂಕಟೇಶ್, ಪ್ರಸನ್ನ ರವರ ಮನೆಯಿಂದ ಬಲಿ ಅನ್ನ ತಂದು ಬಲಿ ಅನ್ನ ಅರ್ಪಿಸಿದರು.ರಥೋತ್ಸವಕ್ಕೂ ಮುನ್ನ ಮುಕ್ತಿ ಬಾವುಟ ಹಾರಾಜು ಪ್ರಕ್ರಿಯೆ ನಡೆಯಿತು. ಮುಕ್ತಿ ಬಾವುಟವನ್ನು 1. 70.000 ರೂಗಳಿಗೆ ಗ್ರಾಮದ ಪೊಲೀಸ್ ಗುರುಸ್ವಾಮಿ ತಮ್ಮದಾಗಿಸಿಕೊಂಡರು
ಮಹಾಮಂಗಳಾರತಿ ರಥೋತ್ಸವಕ್ಕೆ
ನಂತರ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು ನಮ್ಮ ನೇರಲಗುಂಟೆ ಗ್ರಾಮದಲ್ಲಿ ಸತತ 33 ವರ್ಷಗಳಿಂದ ಸಂಭ್ರಮ ಸಡಗರದಿಂದ ಗ್ರಾಮದಲ್ಲಿ ಅದ್ದೂರಿಯಾಗಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವವನ್ನು ಆಚರಣೆ ಮಾಡಲಾಗುತ್ತದೆ ದೇವರು ಗ್ರಾಮದಲ್ಲಿ ಉತ್ತಮ ಮಳೆ ಬೆಳೆ ಜನರ ಆರೋಗ್ಯ ಸುಧಾರಿಸುವಂಥಹಾಗಲಿ ಎಂದರು.ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾವಿರಾರು ಭಕ್ತ ಸಾಗರದ ಮಧ್ಯೆ ರಥ ಸಂಚರಿಸಿತು.ರಥ ಸಂಚರಿಸುವ ದಾರಿಯದ್ದಕ್ಕೂ ಭಕ್ತರು ಬಾಳೆಹಣ್ಣು ಮಂಡಕ್ಕಿ, ಸೂರು ಬೆಲ್ಲ ಎರಚುತ್ತಿದರು.ರಥ ಸಂಚರಿಸುವಾಗ ಜೈ ಆಂಜಿನೇಯ ಘೋಷಣೆಗಳು ಭಕ್ತರಿಂದ ಮಾರ್ಧನಿಸಿದವು.ರಥೋತ್ಸವದಲ್ಲಿ ಜಾನಪದ ಶೈಲಿಯ ಕೋಲಾಟ ಡೊಳ್ಳು ಹಾಗೂ ನವಿಲು ಕುಣಿತ ವೀರಗಾಸೆ ಗಮನ ಸೆಳೆದವು.ಇದೆ ವೇಳೆಯಲ್ಲಿ ನಿವೃತ್ತ ಪ್ರಾಂಶುಪಾಲರಾದ ಬಿ.ಎಸ್ ಮಂಜುನಾಥ್ ಮಾತನಾಡಿದರು. ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಅದ್ದೂರಿಯಾಗಿ ಜರುಗಿತು ನೇರಲಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಯ ಗ್ರಾಮಸ್ಥರು ಜೊತೆಗೂಡಿ ಅದ್ದೂರಿಯಾಗಿ ಆಚರಿಸಲಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶಶಿರೇಖಾ ಎಸ್ ಮುತ್ತಯ್ಯ, ಕಾಂಗ್ರೆಸ್ ಮುಖಂಡ ಸೂರನಾಯಕ, ಮದಕರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸಂದೀಪ್, ಗಜ್ಜುಗಾನಹಳ್ಳಿ ಕನ್ನಯ್ಯ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಕೆ ಟಿ ತಿಪ್ಪೇಸ್ವಾಮಿ, ಜಿ ತಿಪ್ಪೇಸ್ವಾಮಿ, ವರವು ಕಾಟಯ್ಯ, ಶಂಕರ್ ಮೂರ್ತಿ, ತಳಕು ಮತ್ತು ನಾಯಕನಹಟ್ಟಿ ಪದವೀಧರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಕಾಟಂಲಿಂಗಯ್ಯ, ನೇರಲಗುಂಟೆ
ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರಮುನಿಯಪ್ಪ, ಉಪಾಧ್ಯಕ್ಷ ದುರುಗಮ್ಮ, ಸದಸ್ಯರಾದ ಎ.ಒ. ಗೋಪಾಲ, ಚಳ್ಳಕೆರಮ್ಮ, ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ಆರ್ ಚಂದ್ರಶೇಖರ್, ನಾಗವೇಣಿ, ನಾಗಮಣಿ, ಹಾಗೂ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಟಿ ಚನ್ನಪ್ಪ, ಜೆ ಬೈಯಣ್ಣ ಆರ್ ವೆಂಕಟೇಶ್ ರವಿಕುಮಾರ್, ಚನ್ನಪ್ಪ, ಆರ್ ತಿಪ್ಪೇಸ್ವಾಮಿ, ತಿಪ್ಪೇರುದ್ರಪ್ಪ ಪಾಪಣ್ಣ, ಜಿ ತಿಪ್ಪೇಶ್, ನಂದಿ, ಸಮಸ್ತ ನೇರಲಗುಂಟೆ ಗ್ರಾಮಸ್ಥರು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading