
ಚಳ್ಳಕೆರೆ ನ.24
ಅಕ್ರಮವಾಗಿ ದ್ವಿಚಕ್ರವಾಹನದಲ್ಲಿ ಅಕ್ರಮ ಮದ್ಯಸಾಗಾಟ ಮಾಡುತ್ತಿದ್ದ ವ್ಯಕ್ತಿ ಹಾಗೂ ವಾಹನವನ್ನು ಅಬಕಾರಿ ಅಧಿಕಾರಿಗಳುವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದ ಬಳ್ಳಾರಿ ರಸ್ತೆಯಲ್ಲಿ ಅಬಕಾರಿ ಉಪ ನಿರೀಕ್ಷಕರು ಹಾಗೂ ನಿರೀಕ್ಷಕರು ಚಳ್ಳಕೆರೆ ವಲಯ ಸಿಬ್ಬಂದಿಯೊಂದಿಗೆ ಚಳ್ಳಕೆರೆ-ಬಳ್ಳಾರಿ ಮುಖ್ಯ ರಸ್ತೆಯ ನಾಯಕನಹಟ್ಟಿ ಕ್ರಾಸ್ ಬಳಿ ಸರ್ವೀಸ್ ರಸ್ತೆಯಲ್ಲಿನ ಬಸ್ ನಿಲ್ದಾಣದ ಮುಂಭಾಗ ವಾಹನ ತಪಾಸಣೆ ಮಾಡುತ್ತಿದ್ದಾಗ ದೇವರಹಟ್ಟಿ ಚಿಕ್ಕಮ್ಮನಹಳ್ಳಿ ಗ್ರಾಮದ ಚನ್ನಯ್ಯ ( 60 ) ಟಿ.ವಿ.ಎಸ್ ಎಕ್ಸ್.ಎಲ್. ದ್ವಿಚಕ್ರ ವಾಹನದಲ್ಲಿ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿ-90 ಮಿಲಿಯ 40 ಟೆಟ್ರಾ ಪ್ಯಾಕ್ ಗಳು ಒಟ್ಟು-3.600 ಲೀಟರ್ ಮದ್ಯ ಕಂಡುಬಂದಿದ್ದ ಮದ್ಯ ಹಾಗೂ ದ್ವಿಚಕ್ರ ಒಟ್ಟು 40 ಸಾವಿರ ಮೌಲ್ಯದ ವಾಹನವನ್ನು ವಶಕ್ಕೆ ಪಡೆದು ಅಬಕಾರಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ
ಕಾರ್ಯಚರಣೆಯಲ್ಲಿನಾಗರಾಜು ಸಿ ಅಬಕಾರಿ ನಿರೀಕ್ಷಕರು ಟಿ ರಂಗಸ್ವಾಮಿ ಎನ್ ನಾಗರಾಜ ಅಬಕಾರಿ ಮುಖ್ಯ ಪೇದೆ ಟಿ.ಸೋಮಶೇಖರ್ ಮುಖ್ಯ ಪೇದೆ, ದರ್ಶನ್ ಕುಮಾರ್ ಅಬಕಾರಿ ಪೇದೆ ಇತರರು ಭಾಗವಹಿಸಿದ್ದರು.



About The Author
Discover more from JANADHWANI NEWS
Subscribe to get the latest posts sent to your email.