ನಾಯಕನಹಟ್ಟಿ:: ಅ.24.
ಅತಿಯಾದ ಮಳೆಯಿಂದ ಈರುಳ್ಳಿ ಕೊಳೆತು ಹಾಳಾಗಿದ್ದು ಸರಜ್ವನಹಳ್ಳಿ ರೈತ ಜಿ.ಒ.ಬೋರಯ್ಯ ಕಂಗಲಾಗಿದ್ದಾನೆ.
ಹೌದು ಇದು ಹೋಬಳಿಯ ನಲಗೇತನಹಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಮದುರ್ಗ ರೀ ಸರ್ವೇ ನಂಬರ್ 14 ಪಿ ಓಬಮ್ಮ ಗಟ್ಟಿ ಓಬಯ್ಯ ರವರ ಜಮೀನಿನಲ್ಲಿ ಕಳೆದ ಜುಲೈ ತಿಂಗಳಿನಲ್ಲಿ.5 ಎಕರೆ ಜಮೀನಿಗೆ 15 ಕೆ.ಜಿ. ಈರುಳ್ಳಿ ಬೀಜ ಬಿತ್ತನೆ ಮಾಡಿದ್ದರು. ಮೂರು ತಿಂಗಳ ತುಂಬುತ್ತಿದ್ದಂತೆ ಈರುಳ್ಳಿ ಕಟಾವಿಗೆ ಸಿದ್ಧತೆ ಮಾಡಿಕೊಂಡಿದ್ದರು. ಚಿತ್ತ ಮಳೆ ಅತಿಯಾದ ಮಳೆಯಿಂದ ಸಂಪೂರ್ಣವಾಗಿ 5 ಎಕರೆ ಈರುಳ್ಳಿ ಕೊಳೆತು ಹೋಗಿದೆ ಸುಮಾರು 5 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಬೆಳೆ ಪರಿಹಾರಕ್ಕೆ ಸರ್ಕಾರಕ್ಕೆ ಮಾಹಿತಿ ನೀಡಬೇಕು ಎಂದು ಸರಜ್ವನಹಳ್ಳಿ ರೈತ ಜಿ.ಒ. ಬೋರಯ್ಯ. ಮನವಿಯನ್ನು ಮಾಡಿದರೆ.
About The Author
Discover more from JANADHWANI NEWS
Subscribe to get the latest posts sent to your email.