ಚಳ್ಳಕೆರೆ ಅ.24 ಕೆರೆಗಳಿಗೆ ನೀರು ಬಂದು ತುಂಬಿ ಕೋಡಿ ಬೀಳುತ್ತವೆ ಎಂದು ಯಾರಿಗೂ ಉಹಿಸಲಾರದಂತೆ ಮಳೆ ಬಂದು ಕೆರೆಗಳು ಹಾನಿಯಾಗದಂತೆ ನೋಡಿಕೊಳ್ಳ ಬೇಕೆಂದು ಶಾಸಕ ಟಿ.ರಘುಮೂರ್ತಿ ಸೂಚನೆ ನೀಡಿದರು.



ನಗರದ ಕರೆಕಲ್ಲು ಕೆರೆಗೆ ಭೇಟಿ ನೀಡಿ ಕೆರೆ ಏರಿ ತೂಬು ಪರಿಶೀಲನೆ ನಡೆಸಿ ಮಾತಮಾಡಿದರು.
ಕರೆಕಲ್ಲು ಕೆರೆಗೆ ನೀರು ಬಂದರೂ ತುಂಬಿ ಕೋಡಿ ಬೀಳದೆ ಎಷ್ಟೋ ವರ್ಷಗಳ ನಂತರ ಕೋಡಿ ಬಿದ್ದಿದೆ.ಕೆರೆ ಏರಿಯಲ್ಲಿ ನೀರು ಸೋರಿಕೆ.ಕೋಡಿ ದುರಸ್ಥಿ ಹಾಗೂ ಕೆರೆಗೆ ಹಾನಿಯಾಗದಂತೆ ನಿಗಾವಹಿಸ ಬೇಕು ಕೇವಲ ಕೆರೆಕಲ್ಲು ಕೆರೆ ಒಂದಲ್ಲ ತಾಲೂಕಿನ ಎಲ್ಲಾ ಕೆರೆಗಳ ನಿರ್ವಹಣೆ ಮಾಡ ಬೇಕು ಕೆರೆಗಳಿಗೆ ನೀರು ಬಂದಿರುವುದು ಅಂತರ್ಜಲ ಹೆಚ್ವಳವಾಗಿ ನೀರಿನ ಸಮಸ್ಯೆ ತಪ್ಪಿತಂತಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ. ಸಣ್ಣ ನೀರಾವರಿ ಇಲಾಖೆ ಎಇಇ ಅಣ್ಣಪ್ಪ ನಗರಸಭೆ ಸದಸ್ಯರು ಮುಖಂಡರು ಉಪಸ್ಥಿತರಿದ್ದರು
ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳ ತಂಡದೊಂದಿಗೆ ಕರೆಕಲ್ಲು ಕೆರೆಗೆ ಭೇಟಿ ನೀಡಿ ಪರಿಶೀಲನೆ
About The Author
Discover more from JANADHWANI NEWS
Subscribe to get the latest posts sent to your email.