ನಾಯಕನಹಟ್ಟಿ:: ಶ್ರೀ ರಾಮಲಿಂಗೇಶ್ವರ ಕೋಟಿ ಗೋಡೆ ಕುಸಿತ ಮುಂದಿನ ಯುವ ಪೀಳಿಗೆಗೆ ಕೋಟೆಯನ್ನು ರಕ್ಷಿಸಿ ಎಂದು ಗ್ರಾಮ ಪಂಚಾಯತಿ ಸದಸ್ಯ ಬಂಗಾರಪ್ಪ ಹೇಳಿದ್ದಾರೆ.
ಗುರುವಾರ ಹೋಬಳಿಯ ನಲಗೇತನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮದುರ್ಗ ಗ್ರಾಮದ ಹೊಸಗುಡ್ಡದ ಶ್ರೀರಾಮಲಿಂಗೇಶ್ವರ ಗೃಹಂತರ ದೇವಸ್ಥಾನದ ಮುಂಭಾಗದಲ್ಲಿ ಕೋಟೆ ಕುಸಿದಿರುವುದನ್ನು ವೀಕ್ಷಿಸಿ ಮಾತನಾಡಿದ ಅವರು ಹೋಬಳಿಯಲ್ಲಿ ಪ್ರವಾಸಿಗರ ಮುಖ್ಯ ತಾಣವಾಗಿದೆ 900 ವರ್ಷ ಇತಿಹಾಸವುಳ್ಳ ಹೊಸಗುಡ್ಡ ಗೃಹಂತರ ಶ್ರೀ ರಾಮಲಿಂಗೇಶ್ವರ ದೇವಸ್ಥಾನವನ್ನು ರಾಜವೀರ ಮದಕರಿ ನಾಯಕರ ತಮ್ಮ ಮಾರಪ್ಪ ನಾಯಕ ಶ್ರಮವಹಿಸಿ ಕಟ್ಟಿಸಿದ ಕೋಟೆ ಚಾಲುಕ್ಯರು ಈ ದೇವಸ್ಥಾನವನ್ನು ಕೆತ್ತನೆ ಮಾಡಿದ್ದಾರೆ .
ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಸುತ್ತ ಇರುವ ಕೋಟೆಯು ಮಳೆ ಹವಾಂತರದಿಂದ ಕುಸಿದಿದೆ ಕೋಟೆಯನ್ನು ಸಂರಕ್ಷಣೆ ಮಾಡುವಂತ ಪುರತತ್ವ ಇಲಾಖೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸಹ ಕ್ಯಾರೆ ಎನ್ನುತ್ತಿಲ್ಲ .500- 600 ವರ್ಷ ಇತಿಹಾಸ ಇದೆ ಕೋಟೆಯನ್ನು ಸಂರಕ್ಷಣೆ ಮಾಡುವಂತಹ ಅಧಿಕಾರಿಗಳೇ ಯಾರು ಸಹ ಇತ್ತ ಕಡೆ ಗಮನ ಹರಿಸುತ್ತಿಲ್ಲ ಮುಂದಿನ ಯುವ ಪೀಳಿಗೆ ಕೋಟೆಯನ್ನು ರಕ್ಷಿಸಬೇಕು ಎಂದು ಮನವಿಯನ್ನು ಮಾಡಿದರು.





ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಬಿ. ಬೋಸಯ್ಯ, ದ್ರಾಕ್ಷಾಯಣಮ್ಮ ಚಿದಾನಂದ, ಅಚ್ಚಕರಾದ ಗೋಪಾಲ ನಾಯಕ, ಪೂಜಾರಿ ಮಲ್ಲಪ್ಪ ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.