ಚಳ್ಳಕೆರೆ ಅ.24 ಬಹಳ ವರ್ಷಗಳ ನಂತರ ಕೆರೆ ತುಂಬಿ ಕೋಡಿ ಬಿದ್ದಿರುವುದು ಸಂತೋಷ ವಾದರೆ ಅಪಾಯ ಮಟ್ಟದಲ್ಲಿ ನೀರು ರೈತರ ಜಮೀನುಗಳಿಗೆ ನುಗ್ಗಿ ಬೆಳೆ ನಷ್ಟವಾಗಿರುವುದು ರೈತರನ್ನು ಆತಂಕಕ್ಕೆ ದೂಡುವಂತೆ ಮಾಡಿದೆ.






ಹೌದು ಇದು ಚಳ್ಳಕೆರೆ ತಾಲ್ಲೂಕು ವರವು ಗ್ರಾಮದಲ್ಲಿ ಭಾರಿ ಮಳೆಯಿಂದ ಕೆರೆಕಟ್ಟೆ ತುಂಬಿ ಕೋಡಿ ಬಿದ್ದು ನೀರು ಹೋಗಲು
ಸರಿಯಾದ ಮಾರ್ಗವಿಲ್ಲದೆ ಕೋಡಿ ಹಾಗೂ ಸೇತುವ ತೂಬುಗಳು ಚಿಕ್ಕದಾಗಿದ್ದು ನೀರು ರಸ್ತೆ ಮತ್ತು ರೈತರ ಜಮೀನುಗಳಿಗೆ ನುಗ್ಗಿ ರೈತರ ಬೆಳೆಗಳಿಗೆ ಭಾರಿ
ಹಾನಿಯಾಗಿದ್ದು, ಸಾರ್ವಜನಿಕರು ವಾಹನ ಸವಾರೆಉ ಓಡಾಡುವ ರಸ್ತೆಗಳು ಕೊಚ್ಚಿ ಹೋಗಿದ್ದು ಸಂಚಾರಕ್ಕೆ ತೊಂದರೆಯಾಗಿರುತ್ತದೆ ಇನ್ನು ಮಳೆವಬರುವ ನಿರೀಕ್ಷೆ ಇದ್ದು ಕೆರೆ ಕೋಡಿ ತಗ್ಗಿಸ ಬೇಕು ಸೇತುವ ತೂಬು ಹಾಗೂ ಕೊಚ್ಚಿಹೋದವರಸ್ತೆ ದುರಸ್ಥಿ ಪಡಿಸುವ ಜತೆಗೆ ರೈತರಿಗೆ ಬೆಳೆ ನಷ್ಟ ಪರಿಹಾರ ಒದಗಿಸುವಂತೆ ವರವು ಗ್ರಾಮದ ರೈತರು .ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ.ನಾಗರಾಜ್ ಸಂಘಟನೆಯ ಮುಖಂಡರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ
About The Author
Discover more from JANADHWANI NEWS
Subscribe to get the latest posts sent to your email.