
ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ತಾಲೂಕಿನ ಬಳ್ಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕರುಗಳ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಐದು ಜನರು ಅವಿರೋಧವಾಗಿ ಆಯ್ಕೆಯಾದರೆ ಏಳು ಜನರು ಚುನಾವಣೆಯ ಮೂಲಕ ಆಯ್ಕೆಯಾಗಿದ್ದಾರೆ.
ಸಾಲಗಾರರ ಕ್ಷೇತ್ರದ ಅರು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಚಂದ್ರೇಗೌಡ, ಸಿ.ಎಂ.ಗೋಪಾಲ್, ಮೋಹನ, ಮಹಾದೇವ, ಕೃಷ್ಣೆಗೌಡ, ಬೀರೇಶ್ ಅವರುಗಳು ಆಯ್ಕೆಯಾಗಿದ್ದಾರೆ.
ಸಾಲಗಾರರಲ್ಲದ ಕ್ಷೇತ್ರದಿಂದ ಲಕ್ಷ್ಮಿಪುರ ಎಂ.ಮಂಜುನಾಥ್ ಆಯ್ಕೆಯಾಗಿದ್ದಾರೆ.
ಅವಿರೋಧವಾಗಿ ಭಾರತಿ ಹುಚ್ಚೇಗೌಡ, ಕಲ್ಪನಾ ಸುರೇಶ್, ಪದ್ಮಮ್ಮ ಸುಂದರೇಗೌಡ, ರಾಮಯ್ಯ, ಬೊಮ್ಮರಾಯ ನಾಯಕ ಅವರುಗಳು ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ರಿಟರ್ನಿಂಗ್ ಆಫೀಸರ್ ಸವಿತಾ ಕಾರ್ಯನಿರ್ವಹಿಸಿದರು.
ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರ ನೂತನ ನಿರ್ದೇಶಕರುಗಳನ್ನು ಅಭಿನಂದಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಲ್.ಎಂ.ಸಣ್ಣಪ್ಪ, ಗ್ರಾಮ ಪಂಚಾಯತ್ ಅಧ್ಯಕ್ಷೆ ಮಣಿಲಾ ಮಂಜುನಾಥ್, ಮುಖಂಡರುಗಳಾದ ಸಯ್ಯದ್ ಅಹಮದ್, ಹುಚ್ಚೇಗೌಡ, ನಾಗೇಂದ್ರ, ರಾಮೇಗೌಡ, ಮಹೇಶ್, ತುಳಸಿ, ರಮೇಶ್, ಮಂಜುನಾಥ್ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.