
ತಳಕು ಫೆ.24
ಸಾರ್ವಜನಿಕರಿಗೆ ಉತ್ತಮ ಆಡಳಿತ ನೀಡುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ. ಅವುಗಳ ತನ್ನ ಸಮರ್ಪಕ ಅನುಷ್ಠಾನದ ಜವಾಬ್ದರಿ ಕಂದಾಯ ಇಲಾಖೆಯದಾಗಿರುತ್ತದೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಟ ಹೇಳಿದರು.
ತಾಲ್ಲೂಕಿನ ತಳಕು ಹೋಬಳಿ ಕೇಂದ್ರದಲ್ಲಿ ಸುಮಾರು 18.82 ಲಕ್ಷರೂ ವೆಚ್ಚದಲ್ಲಿ ನಾಡಕಚೇರಿಯ ನೂತನ ಕಟ್ಡಡ ಉದ್ಘಾಟನೆ ನೆರವೇರಿಸಿ ಕ ಮಾತನಾಡಿದರು.









ಕಂದಾಯ ಕೆಲಸದ ಒತ್ತಡವಿದ್ದರೂ ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸಿ, ತಮ್ಮ ಜವಾಬ್ದರಿಯನ್ನು ಸಮರ್ಥವಾಗಿ ನಿಭಾಯಿಸುಮೂಲಕ ಎಲ್ಲರಿಗೂ ಜನಸ್ನೇಹಿ ಆಡಳಿತ ನೀಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿದರು.
ತಳಕು ಗ್ರಾಪಂ ಅಧ್ಯಕ್ಷೆ ಉಮಾ ಕುಮಾರ್ ಗ್ರಾಪಂ ಸದಸ್ಯರು . ರೈತಸಂಘದ ಮುಖಂಡರಾದ ನಿಜಲಿಂಗಪ್ಪ ,ಈರಣ್ಣ . ಮಲ್ಲೇಶಪ್ಪ ಉಪತಹಸೀಲ್ದಾರ್ ರಫಿ, ರಾಜಸ್ವ ನಿರೀಕ್ಷ ಲಿಂಗೇಗೌಡ.ಗ್ರಾಮ ಆಡಳಿತ ಅಧಿಕಾರಿಗಳು ರೈತರು ಇತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.